ಬೆಂಗಳೂರು, ನ 04 (DaijiworldNews/MS): ಇಲ್ಲಿಯವರೆಗೆ ರೈತರ ಪಂಪ್ಸೆಟ್ಗಳಿಗೆ ಐದು ಗಂಟೆ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಇನ್ಮುಂದೆ ಪ್ರತಿದಿನ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ.
ಈ ಕುರಿತು ಕೆಪಿಟಿಸಿಎಲ್ನೊಂದಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಸಚಿವರ ಸೂಚನೆಯಂತೆ ಕೆಪಿಟಿಸಿಎಲ್ ದಿನಕ್ಕೆ ಏಳು ಗಂಟೆ ನಿರಂತರ ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಒದಗಿಸಲು ಒಪ್ಪಿಕೊಂಡಿದೆ. ಹೀಗಾಗಿ, ಬಿ.ಸಿ.ಪಾಟೀಲ್ ಅವರು ಕೆಪಿಟಿಸಿಎಲ್ಗೆ ಧನ್ಯವಾದ ಸಲ್ಲಿಸಿದ್ದಾರೆ