ಚಿಕ್ಕಮಗಳೂರು, ನ 03 (DaijiworldNews/DB): ಕಾಂಗ್ರೆಸ್ನಲ್ಲಿ ತಣ್ಣಗಾಗಿದ್ದ ಮುಂದಿನ ಮುಖ್ಯಮಂತ್ರಿ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಅವರು ಚಿಕ್ಕಮಗಳೂರಿಗೆ ತೆರಳಿದ್ದ ವೇಳೆ ಕಾರ್ಯಕರ್ತರು ’ಸಿದ್ದು ಸಿಎ” ಘೋಷಣೆ ಕೂಗಿದ ಪ್ರಸಂಗ ನಡೆಯಿತು.
ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು. ಸುದ್ದಿಗೋಷ್ಠಿ ಮುಗಿಯುತ್ತಿದಂತೆಯ ಹೊರಗಡೆ ಇದ್ದ ಕಾರ್ಯಕರ್ತರು ಸಿದ್ದು ಸಿಎಂ ಘೋಷಣೆ ಕೂಗಿದರು.
ಇನ್ನು ವಲಸೆ ಹೋದವರನ್ನು ಡಿಕೆಶಿಯವರು ಕಾಂಗ್ರೆಸ್ಗೆ ಮತ್ತೆ ಆಹ್ವಾನಿಸಿರುವುದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ಅರ್ಜಿ ಹಾಕಬಹುದೇ ಎಂದು ಕೇಳಿದಕ್ಕೆ ಅಸ್ತು ಎಂದಿದ್ದಾರೆ. ಆದರೆ ಯಾರಿಗೆ ಕಾಂಗ್ರೆಸ್ ಪಕ್ಷದ ಐಡಿಯಾಲಜಿ, ನಾಯಕತ್ವದ ಮೇಲೆ ನಂಬಿಕೆ ಇದೆಯೋ ಅಂತಹವರು ಮಾತ್ರ ಅರ್ಜಿ ಹಾಕಬಹುದು. ಅವರು ಅರ್ಜಿ ಹಾಕಿದ ತತ್ಕ್ಷಣ ಪಕ್ಷಕ್ಕೆ ಸೇರಿದ್ದಾರೆ ಎಂದಲ್ಲ. ಅಲ್ಲಂ ವೀರಭದ್ರಪ್ಪ ಅವರ ಅಧ್ಯಕ್ಷತೆಯಲ್ಲಿರುವ ಸಮಿತಿಯಲ್ಲೇ ಇದೆಲ್ಲ ಅಂತಿಮವಾಗಬೇಕಾಗುತ್ತದೆ ಎಂದರು.
ವಿಧಾನಸಭಾ ಚುನಾವಣೆಗೆ ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂಬುದಾಗಿ ಹಲವು ಕಡೆಗಳಿಂದ ನನಗೆ ಆಹ್ವಾನಗಳು ಬರುತ್ತಿವೆ. ಬಾದಾಮಿಯಲ್ಲಿ ನಿಲ್ಲಬೇಕೆಂದು ಅಲ್ಲಿಯವರು ಒತ್ತಾಯ ಮಾಡುತ್ತಿದ್ದಾರೆ. ಇನ್ನು ಕೋಲಾರ, ಚಿಕ್ಕಮಗಳೂರು, ವರುಣಾ ಕ್ಷೇತ್ರದ ಜನರೂ ನನ್ನನ್ನು ಅಲ್ಲಿ ಸ್ಪರ್ಧಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಆದರೆ ನಾನಿನ್ನೂ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬುದನ್ನು ಯೋಜಿಸಿಲ್ಲ. ಯೋಚನೆ ಮಾಡಿ ಜನರು ಮತ್ತು ಪಕ್ಷ ಏಣು ಹೇಳುತ್ತಾರೆಂಬುದರ ಮೇಲೆ ನಿರ್ಧರಿಸುತ್ತೇನೆ ಎಂದು ತಿಳಿಸಿದರು.