ಅಹ್ಮದಾಬಾದ್, ನ 02 (DaijiworldNews/HR): ಗುಜರಾತ್ನ ಮೊರ್ಬಿಯಲ್ಲಿ ಅಕ್ಟೋಬರ್ 30 ಕರಾಳ ರವಿವಾರವಾಗಿದ್ದು, ತೂಗು ಸೇತುವೆ ದುರಂತ ಪ್ರಕರಣದ ವಿಚಾರವಾಗಿ ನಾವು ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು ಗುಜರಾತ್ ವಕೀಲರ ಸಂಘ ಘೋಷಣೆ ಮಾಡಿದೆ.
ಈ ಪ್ರಕರಣದಲ್ಲಿ ಬಂಧಿತರಾದ ಒಂಬತ್ತು ಆರೋಪಿಗಳನ್ನು ನಮ್ಮ ಸಂಘದ ಯಾವುದೇ ವಕೀಲರು ಪ್ರತಿನಿಧಿಸುವುದಿಲ್ಲ ಎಂದು ಗುಜರಾತ್ನ ಎರಡು ವಕೀಲರ ಸಂಸ್ಥೆಗಳಾದ ಮೊರ್ಬಿ ಬಾರ್ ಅಸೋಸಿಯೇಷನ್ ಮತ್ತು ರಾಜ್ಕೋಟ್ ಬಾರ್ ಅಸೋಸಿಯೇಷನ್ ನಿರ್ಧರಿಸಿರುವುದಾಗಿ ವರದಿಯಾಗಿದೆ.
ಪೊಲೀಸರು ಸೋಮವಾರ ಒಂಬತ್ತು ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಅಪರಾಧ ನರಹತ್ಯೆ ಕೊಲೆಯಲ್ಲ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.