ಕೇರಳ, ನ 02 (DaijiworldNews/HR): 12 ದಿನದ ಪುಟ್ಟ ಮಗುವನ್ನು ತನ್ನ ತಂದೆಯೇ ಅಪಹರಣ ಮಾಡಿರುವ ಕೇರಳದಲ್ಲಿ ನಡೆದಿದ್ದು, ಈ ಮಗುವನ್ನು ಪೊಲೀಸರು ರಕ್ಷಿಸಿದ್ದಾಗ ಮಗು ಆಹಾರವಿಲ್ಲದೆ ನಿತ್ರಾಣಗೊಂಡಿದ್ದಕ್ಕೆ ಮಹಿಳಾ ಪೊಲೀಸರೊಬ್ಬರು ಎದೆ ಹಾಲು ಕುಡಿಸಿ ಮಾನವೀಯತೆ ಮೆರೆದಿದ್ದಾರೆ.
ಪೂಲಾಕ್ಕಡವು ನಿವಾಸಿ ಆಶಿಖಾ ಎಂಬವರು ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಕೆಯ ಪತಿ ಆದಿಲ್ ಮಗುವನ್ನು ಅಪಹರಿಸಿದ್ದು ಈ ಬಗ್ಗೆ ಚೆವಾಯೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಇನ್ನು ಮಗುವಿನ ಪತ್ತೆಗೆ ಮುಂದಾದ ಪೊಲೀಸರಿಗೆ ಮಹಿಳೆಯ ಪತಿ ಸುಲ್ತಾನ್ ಬತೇರಿಗೆ ಕರೆದುಕೊಂಡು ಹೋಗಿದ್ದು ತಿಳಿದು ಬಂದಿದ್ದು, ಅಲ್ಲಿಂದ ಬೆಂಗಳೂರಿಗೆ ರವಾನಿಸಲು ಸಿದ್ಧತೆ ನಡೆಸಿದ್ದ. ದಾಳಿ ನಡೆಸಿದ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಆದರೆ ಮಗು ತೀವ್ರವಾಗಿ ನಿತ್ರಾಣಗೊಂಡಿದ್ದಾಗ ಈ ವೇಳೆ ಪೊಲೀಸ್ ಅಧಿಕಾರಿ ರಮ್ಯಾ ಅವರು ಠಾಣೆಯಲ್ಲಿಯೇ ಮಗುವಿಗೆ ಎದೆ ಹಾಲು ಕುಡಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.