ಮುಳಬಾಗಿಲು, ನ 01(DaijiworldNews/MS): ಜೆಡಿಎಸ್ ಪಂಚರತ್ನ ರಥಯಾತ್ರೆಯ ಸಮಾವೇಶಕ್ಕೆ ಬಿರುಸಾದ ಮಳೆ ಅಡ್ಡಿಯಾಗಿದೆ. ಸಮಾವೇಶಕ್ಕೆ ಹೊರ ಜಿಲ್ಲೆಗಳಿಂದಲೂ ಸಾವಿರಾರು ಜನರು ಬಂದಿದ್ದು, ಏಕಾಏಕಿ ಸುರಿಯುತ್ತಿರುವ ಮಳೆ ಕಾರಣ ಬ್ಯಾನರ್, ಫ್ಲೆಕ್ಸ್ ಅನ್ನು ಆಸರೆಯಾಗಿಸಿಕೊಂಡಿದ್ದಾರೆ.
ಮುಳಬಾಗಿಲು ತಿರುಪತಿ ರಸ್ತೆಯ ಬಾಲಾಜಿ ಭವನದ ಪಕ್ಕದ ಮೈದಾನದ 32 ಎಕರೆ ಪ್ರದೇಶದಲ್ಲಿ ಒಂದೂವರೆ ಲಕ್ಷ ಕುರ್ಚಿ ಹಾಕಲಾಗಿದೆ. ಆದರೆ, ಬೃಹತ್ ಸಮಾವೇಶ ನಡೆಯಬೇಕಾಗಿದ್ದ ಈ ಪ್ರದೇಶ ಮಳೆಯಿಂದ ಕೆಸರುಗದ್ದೆಯಂತೆ ಆಗಿದೆ. ನಿಗದಿಯಂತೆ ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭವಾಗಬೇಕಿದೆ.
ಸಮಾವೇಶದಲ್ಲಿ 2023 ರ ವಿಧಾನ ಸಭೆ ಚುನಾವಣೆಯ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆ ಜೆಡಿಎಸ್ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ.