ವಿಜಯಪುರ, ನ 01 (DaijiworldNews/HR): ವಿಜಯಪುರ ಪಾಲಿಕೆಯ ಚುನಾವಣೆಯಲ್ಲಿ ಕೆಲವು ಸ್ಥಳೀಯ ನಾಯಕರು ಮನೆಯಲ್ಲಿ ಕುಳಿತು ಬಿಜೆಪಿ ಸೋಲಿಸಲು ಕುತಂತ್ರ ಮಾಡಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿದ್ದ ಕೆಲ ಕಳ್ಳರ ಗ್ಯಾಂಗ್ಗೆ ಬೆಂಗಳೂರು, ಮುಧೋಳದಿಂದ ಸಾಕಷ್ಟು ಸಹಾಯ ಹಸ್ತ ಬಂದಿದದು, ಬಿಜೆಪಿ ಸೋಲಿಸಿದರೆ ಯತ್ನಾಳ ಮಣಿಸಲು ಸಾಧ್ಯ ಎಂದು ಸಂಚು ರೂಪಿಸಿದ್ದರು. ಆದರೆ ಮಹಾನಗರದ ಜನರು ಹುಚ್ಚರಿಲ್ಲ, ಅವರ ಕುತಂತ್ರಕ್ಕೆ ಸೂಕ್ತವಾಗಿಯೇ ಉತ್ತರಿಸಿದ್ದಾರೆ. ನಾನು ಮಾತನಾಡುವುದಕ್ಕಿಂತ ಜನತೆಯೇ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನತೆಯ ಆಶೀರ್ವಾದದಿಂದ ಬಿಜೆಪಿ ವಿಜಯ ಸಾಧಿಸಿದ್ದು, ಇದು ಭವಿಷ್ಯದಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆ ದಿಕ್ಸೂಚಿ ಎಂದರು.
ಇನ್ನು ದೇಶದಲ್ಲಿ ಪ್ರಧಾನಿ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಮಾಡಿರುವ ಸಾಧನೆ, ನಗರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಮೆಚ್ಚಿ ಜನರು ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ.