ಮೈಸೂರು, ಅ 31 (DaijiworldNews/HR): ನನ್ನ ಇಮೇಜ್ ಡೌನ್ ಮಾಡುವುದು ಬಿಜೆಪಿಯವರ ಉದ್ದೇಶ, ಇದು ಆರ್ಎಸ್ಎಸ್ ಕಾರ್ಯತಂತ್ರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿಯವರಿಗೆ ನನ್ನನ್ನು ಕಂಡರೆ ಭಯ. ಅದಕ್ಕೆ ನನ್ನನ್ನು ಟಾರ್ಗೆಟ್ ಮಾಡುತ್ತಾರೆ. ಆರ್ಎಸ್ಎಸ್ ಬರೆದುಕೊಟ್ಟಂತೆ ಬಿಜೆಪಿ ಗಿರಾಕಿಗಳು ಭಾಷಣ ಮಾಡುತ್ತಾರೆ. ಸಾಮಾಜಿಕ ನ್ಯಾಯದ ಪರ ಅವರು ಯಾವತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.
ಇನ್ನು ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್. ಆತ ಆರ್ಎಸ್ಎಸ್ ಹಿನ್ನೆಲೆಯವನು. ಆರ್ಎಸ್ಎಸ್ ಸುಳ್ಳಿನ ಫ್ಯಾಕ್ಟರಿ ಇಟ್ಟಿದ್ದಾರೆ. ಸುಳ್ಳನ್ನೇ ಉತ್ಪಾದನೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.