ಹೈದರಾಬಾದ್, ಅ 31 (DaijiworldNews/DB): ಆಡಳಿತರೂಢ ಟಿಆರ್ಎಸ್ನ ಸುಮಾರು 20-30 ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆ ಮೂಲಕ ಸರ್ಕಾರ ಬೀಳಿಸುವುದು ಆ ಪಕ್ಷದ ಉದ್ದೇಶ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಆರೋಪಿಸಿದ್ದಾರೆ.
ಉಪಚುನಾವಣೆ ನಡೆಯಲಿರುವ ಮುನುಗೋಡು ಭಾಗದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಟಿಆರ್ಎಸ್ನ ಶಾಸಕರಿಗೆ 100 ಕೋಟಿ ರೂ. ಆಮಿಷವೊಡ್ಡಲು ದೆಹಲಿಯ ದಲ್ಲಾಳಿಗಳು ಪ್ರಯತ್ನನಿರತರಾಗಿದ್ದಾರೆ, ಆದರೆ ಟಿಆರ್ಎಸ್ ಶಾಸಕರು ಮಣ್ಣಿನ ಮಕ್ಕಳು. ಅವರೆಂದೂ ಇಂತಹ ಆಮಿಷಗಳಿಗೆ ಬಲಿಯಾಗುವವರಲ್ಲ. ಹಾಗಾಗಿ ಬಿಜೆಪಿಯ ಈ ಆಮಿಷವನ್ನು ತಿರಸ್ಕರಿಸಿದ್ದಾರೆ ಎಂದರು.
ಇನ್ನು ಕೆಸಿಆರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಟಿಆರ್ಎಸ್ ಪಕ್ಷದ ಶಾಸಕರು 100 ಕೋಟಿ ರೂ. ಮೌಲ್ಯ ಬೆಲೆ ಬಾಳುವವರಲ್ಲ. ಹೀಗಾಗಿ ಆ ಶಾಸಕರನ್ನು ಖರೀದಿಸುವುದಾಗಲೀ, ಸರ್ಕಾರ ಬೀಳಿಸುವುದಾಗಲೀ ಉದ್ದೇಶ ಬಿಜೆಪಿಗಿಲ್ಲ ಎಂದಿದೆ.