ಚಿಕ್ಕಮಗಳೂರು, ಅ 31 (DaijiworldNews/HR): ಅಕ್ಟೋಬರ್ 29ರಂದು ಹೃದಯಾಘಾತದಿಂದ ಮೂಡಿಗೆರೆ ಪಟ್ಟಣದ ಒಂಬತ್ತನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಸಾವನ್ನಪ್ಪಿದ್ದು, ಪೋಷಕರು ಮಗಳ ಕಣ್ಣುಗಳನ್ನು ದಾನಮಾಡಲು ಮುಂದಾದರೂ ಅದನ್ನು ಪಡೆಯಲು ಅಧಿಕಾರಿಗಳು ಹಿಂದೇಟು ಹಾಕಿರುವ ಘಟನೆ ನಡೆದಿದೆ.
ವೈಷ್ಣವಿ ಶನಿವಾರ ಸಂಜೆ ಏಳು ಗಂಟೆಯ ಸುಮಾರಿಗೆ ಸಾವನ್ನಪ್ಪಿದ್ದು, ಈ ವೇಳೆ ಆಕೆಯ ಪೋಷಕರು ಮಗಳ ಕಣ್ಣುಗಳನ್ನು ದಾನಮಾಡಲು ನಿರ್ಧರಿಸಿದ್ದಾರೆ. ಆದರೆ ತಡರಾತ್ರಿಯಾದರೂ ಕಣ್ಣು ದಾನ ಪಡೆಯಲು ಬಾರದ ಹಿನ್ನಲೆಯಲ್ಲಿ ಅಧಿಕಾರಿಗಳು ಹಾಗೂ ಸಂಸ್ಥೆಯ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸ್ಥಳೀಯರ ಆಕ್ರೋಶದ ನಂತರ ಅಧಿಕಾರಿಗಳ ತಂಡ ಆಗಮಿಸಿ ಕಣ್ಣುಗಳನ್ನು ದಾನ ಪಡೆಯುವ ಪ್ರಕ್ರಿಯೇಯನ್ನು ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ.