ನವದೆಹಲಿ, ಅ 31 (DaijiworldNews/HR): ಅಕ್ಟೋಬರ್ ತಿಂಗಳ ಮೊದಲ ಒಂಭತ್ತು ದಿನಗಳಲ್ಲಿ ಹಳಿಯಲ್ಲಿ ಜಾನುವಾರುಗಳು ಕಂಡು ಬಂದಿರುವುದರಿಂದ 200 ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಈ ವರ್ಷ 4,433 ರೈಲುಗಳ ಸಂಚಾರಕ್ಕೆ ಜಾನುವಾರುಗಳು ಅಡ್ಡಿಯಾಗಿದೆ ಎಂದು ತಿಳಿದು ಬಂದಿದೆ.
ಜನವಸತಿ ಪ್ರದೇಶಗಳ ನಡುವೆ ಕೆಲವು ಸ್ಥಳಗಳಲ್ಲಿ ಹಳಿಗಳು ಹಾದು ಹೋಗಿರುವುದರಿಂದ ಜಾನುವಾರುಗಳು ಹಳಿಯಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಈ ಸಮಸ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಾಗುತ್ತಿಲ್ಲ.
ಇನ್ನು ಉತ್ತರ ಕೇಂದ್ರ ರೈಲ್ವೇ ವಲಯದಲ್ಲಿ 2020-21ನೇ ಸಾಲಿನಲ್ಲಿ 6.500ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಜನವರಿಯಲ್ಲಿ ಹಳಿಯಲ್ಲಿ ಜಾನುವಾರುಗಳಿಗೆ ರೈಲುಗಳು ಡಿಕ್ಕಿ ಹೊಡೆಯುವ 360 ಘಟನೆಗಳು ನಡೆದಿದ್ದವು. ಸೆಪ್ಟೆಂಬರ್ ವೇಳೆಗೆ ಅದರ ಸಂಖ್ಯೆ 635ಕ್ಕೆ ಏರಿಕೆಯಾಗಿದೆ. 4,433 ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಕೂಡ ಒಂದೇ ತಿಂಗಳಲ್ಲಿ ನಾಲ್ಕು ಬಾರಿ ಜಾರುವಾರಿಗಳು ಢಿಕ್ಕಿ ಹೊಡೆದಿದೆ. ಅಕ್ಟೋಬರ್ 6 ರಂದು ಗುಜರಾತ್ನ ವತ್ವಾ ಮತ್ತು ಮಣಿನಗರ ರೈಲು ನಿಲ್ದಾಣಗಳ ನಡುವೆ ಮುಂಬೈನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ನಾಲ್ಕು ಎಮ್ಮೆಗಳು ಸಾವನ್ನಪ್ಪಿದ್ದವು. ಹಾನಿಯಾದ ಕಾರಣ ಅದರ ಮೂಗಿನ ಫಲಕವನ್ನು ರಾತ್ರೋರಾತ್ರಿ ಬದಲಾಯಿಸಬೇಕಾಯಿತು. ಮರುದಿನ (ಅಕ್ಟೋಬರ್ 7) ಸಂಭವಿಸಿದ ಎರಡನೇ ಘಟನೆಯಲ್ಲಿ, ಮುಂಬೈಗೆ ತೆರಳುತ್ತಿದ್ದಾಗ ಗುಜರಾತ್ನ ಆನಂದ್ ಬಳಿ ರೈಲು ಹಸುವಿಗೆ ಡಿಕ್ಕಿ ಹೊಡೆದಿದ್ದು, ಅಕ್ಟೋಬರ್ 30 ರಂದು ಮತ್ತೆ ಗುಜರಾತ್ ನಲ್ಲಿ ಜಾನುವಾರುವಿಗೆ ರೈಲು ಢಿಕ್ಕಿ ಹೊಡೆದಿದೆ.