ಉತ್ತರ ಪ್ರದೇಶ, ಅ 31 (DaijiworldNews/HR): ಸಡಿಲವಾದ ಮಣ್ಣಿನ ರಾಶಿ ಕುಸಿದು ಇಬ್ಬರು ಅಪ್ರಾಪ್ತ ಬಾಲಕಿಯರು ಸಾವನ್ನಪ್ಪಿ, ಮೂವರನ್ನು ರಕ್ಷಣೆ ಮಾಡಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯ ಭೀರಾ ಕೊತ್ವಾಲಿ ವ್ಯಾಪ್ತಿಯ ಢಾಕಿಯಾ ಗ್ರಾಮದ ಶಾರದಾ ನದಿ ದಡದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ಪೂನಂ ದೇವಿ(12) ಮತ್ತು ಶಿವಾನಿ(13) ಎಂದು ಗುರುತಿಸಲಾಗಿದೆ.
ಅವಶೇಷಗಳಡಿಯಲ್ಲಿ ಸಿಲುಕಿದ್ದ ಮೂವರು ಬಾಲಕಿಯರಾದ ನಿಕ್ಕಿ, ನಾಯ್ರಾ ಮತ್ತು ನೈನ್ಸಿ ಅವರನ್ನು ನಂತರ ಸ್ಥಳೀಯರು ರಕ್ಷಿಸಿದ್ದಾರೆ.
ಇನ್ನು ಐವರು ಬಾಲಕಿಯರು ತಮ್ಮ ಗುಡಿಸಲುಗಳನ್ನು ಸರಿಪಡಿಸಲು ಮಣ್ಣು ಸಂಗ್ರಹಿಸಲು ಶಾರದಾ ನದಿಗೆ ಹೋಗಿದ್ದು, ಈ ಬಾಲಕಿಯರು ನದಿಯ ದಡದ ಬಳಿ ಒಂದು ಸ್ಥಳವನ್ನು ಆರಿಸಿಕೊಂಡು ಮಣ್ಣನ್ನು ಅಗೆಯಲು ಪ್ರಾರಂಭಿಸಿದಾಗ ಮಣ್ಣು ಅವರ ಮೇಲೆ ಕುಸಿದು ಈ ದುರಂತ ಉಂಟಾಗಿದೆ.