ಜಮ್ಮು, ಅ 30 (DaijiworldNews/DB): ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸತೀಶ್ ಶರ್ಮಾ ಶಾಸ್ತ್ರಿ ಮತ್ತು ಇತರ ಎಂಟು ಮಂದಿ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಜಮ್ಮು ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಮತ್ತು ಸಂಸದ ಜುಗುಲ್ ಕಿಶೋರ್ ಶರ್ಮಾ ಅವರು ಬಿಜೆಪಿಗೆ ಸೇರ್ಪಡೆಯಾದ ಎಎಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಬಿಜೆಪಿ ಸೇರ್ಪಡೆಯಿಂದ ನನ್ನ ಉತ್ಸಾಹ ಇಮ್ಮಡಿಯಾಗಿದೆ. ಸಮಾಜಕ್ಕಾಗಿ ತೊಡಗಿಸಿಕೊಳ್ಳುವ ಮೂಲಕ ಜನರ ಅಭಿವೃದ್ದಿ ಮತ್ತು ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಕೆಲಸ ಮಾಡುತ್ತೇನೆ ಎಂದು ಈ ವೇಳೆ ಸತೀಶ್ ಶರ್ಮಾ ಹೇಳಿದರು.
ಇನ್ನು ಪಕ್ಷದ ಚಿಂತನೆ, ಸಿದ್ದಾಂತಕ್ಕೆ ತಲೆಬಾಗಿ ಯಾರೇ ಬಿಜೆಪಿ ಸೇರ್ಪಡೆಯಾದರೂ ಅವರನ್ನು ಸ್ವಾಗತಿಸುತ್ತೇವೆ. ಅವರ ಸೇರ್ಪಡೆ ನಮಗೆ ಇನ್ನಷ್ಟು ಶಕ್ತಿ ತುಂಬುತ್ತದೆ ಎಂದು ರವೀಂದರ್ ರೈನಾ ಹೇಳಿದ್ದಾರೆ.