ನವದೆಹಲಿ, ಅ 29 (DaijiworldNews/DB): ನಾಲ್ಕು ವರ್ಷಗಳಿಂದ ಉತ್ತರಪ್ರದೇಶದಲ್ಲಿ ಪೊಲೀಸ್ ನೇಮಕಾತಿಗಾಗಿ ಕಾಯುತ್ತಿರುವ ಯುವಕರ ವಯಸ್ಸು ಉದ್ಯೋಗಕ್ಕೆ ನಿಗದಿಪಡಿಸಿದ ವಯಸ್ಸನ್ನು ಮೀರುತ್ತಿದೆ. ಆದರೆ ಸರ್ಕಾರ ಈ ವಿಷಯದಲ್ಲಿ ಮೌನ ವಹಿಸಿದೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನೇಮಕಾತಿಯ ಬಗ್ಗೆ ಭರವಸೆಯೇ ದೊರೆತಿಲ್ಲ. ಇದರಿಂದ ನೊಂದ ಯುವಕರು ಸಾಮಾಜಿಕ ಜಾಲತಾಣಗಳ ಮುಖಾಂತರ ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ ಯಾವುದೇ ಭರವಸೆ, ಪರಿಹಾರಗಳು ಸರ್ಕಾರದ ಕಡೆಯಿಂದ ಅವರಿಗೆ ಸಿಕ್ಕಿಲ್ಲ ಎಂದರು.
ನೇಮಕಾತಿಗಾಗಿ ಕಾಯುತ್ತಿರುವವರು ಬೀದಿಗಿಳಿದರೆ ತೊಂದರೆ ಕೊಡುವವರು ಎಂದು ಅವರನ್ನು ಕರೆಯುತ್ತಾರೆ. ಇದು ಅವರಿಗೆ ಮಾಡಿದ ಅನ್ಯಾಯ ಎಂದಿದ್ದಾರೆ.