ತೆಲಂಗಾಣ, ಅ 29 (DaijiworldNews/MS): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ತೆಲಂಗಾಣದಲ್ಲಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಭದ್ರಾಚಲಂನಿಂದ ನಡಿಗೆ ಆರಂಭಿಸಿರುವ ರಾಹುಲ್ ಅವರನ್ನು ಆದಿವಾಸಿ ಜನರು ಬರಮಾಡಿಕೊಂಡರು. ಬಳಿಕ 'ಕೊಮ್ಮು ಕೋಯಾ' ಎಂಬ ಪ್ರಾಚೀನ ಸಂಪ್ರಾದಾಯಿಕ ಕಲಾಪ್ರಕಾರದ ನೃತ್ಯ ಪ್ರದರ್ಶಿಸಿದರು.
ಕಲೆಗೆ ಮನಸೋತ ರಾಹುಲ್, ಅವರೊಂದಿಗೆ ಶಿರಸ್ತ್ರಾಣವನ್ನು ಧರಿಸಿ ಅವರೊಂದಿಗೆ ನೃತ್ಯಕ್ಕೆ ಹೆಜ್ಜೆ ಹಾಕಿದರು. ಇದೀಗ ಟ್ವಿಟ್ಟರ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, 'ನಮ್ಮ ಆದಿವಾಸಿಗಳು ನಮ್ಮ ಕಾಲಾತೀತ ಸಂಸ್ಕೃತಿಗಳು ಮತ್ತು ವೈವಿಧ್ಯತೆಯ ಭಂಡಾರ ವಿವಿಧ ಕಲೆಯನ್ನು ನಾವು ಕಲಿಯಬೇಕುಮತ್ತು ಸಂರಕ್ಷಿಸಬೇಕು' ಎಂದಿದ್ದಾರೆ.