ನವದೆಹಲಿ, ಅ 29 (DaijiworldNews/DB): ಭ್ರಷ್ಟಾಚಾರದ ಕುರಿತು ವಿಷಯಗಳು ಮುನ್ನೆಲೆಗೆ ಬರದಂತೆ ತಡೆಯಲು ಕರೆನ್ಸಿ ನೋಟುಗಳಲ್ಲಿ ಲಕ್ಷ್ಮೀ, ಗಣೇಶ ಚಿತ್ರ ಮುದ್ರಿಸಬೇಕೆಂದು ಒತ್ತಾಯಿಸುವ ತಂತ್ರ ಹೂಡಿದ್ದಾರೆ ಎಂದು ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.
ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ, ಗಣೇಶ ಚಿತ್ರ ಮುದ್ರಿಸಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ರ ಬರೆದಿರುವ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಜ್ರೀವಾಲ್ ಅರಾಜಕತೆಯ ಸಂಕೇತವಾಗಿದ್ದಾರೆ. ಭ್ರಷ್ಟಾಚಾರ ವಿಷಯಗಳ ಬಗ್ಗೆ ಚರ್ಚೆ ನಡೆಯದಂತೆ ತಡೆಯುವುದು ಅವರ ಉದ್ದೇಶ. ಅದಕ್ಕಾಗಿ ಕರೆನ್ಸಿ ನೋಟುಗಳಲ್ಲಿ ದೇವರ ಫೋಟೋ ಮುದ್ರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ವಿಚಾರ ಮುನ್ನೆಲೆಗೆ ಬಂದು, ಭ್ರಷ್ಟಾಚಾರದ ಚರ್ಚೆಗಳು ತೆರೆಗೆ ಸರಿಯಲಿ ಎಂಬುದು ಅವರ ತಂತ್ರವಾಗಿದೆ ಎಂದರು.
ಮುಸ್ಲಿಂ ಧರ್ಮಗಳಿಗೆ ದೆಹಲಿಯಲ್ಲಿ 18 ಸಾವಿರ ರೂ. ನೀಡುವ ಕೇಜ್ರೀವಾಲ್, ಅರ್ಚಕರು, ಗುರುದ್ವಾರದ ಗ್ರಂಥಿಗಳು ಮತ್ತು ಪಾದ್ರಿಗಳಿಗೂ ಅಷ್ಟೇ ಹಣವನ್ನು ನೀಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು, ಮೊದಲು ಇವರೆಲ್ಲರಿಗೂ ಸಮಾನವಾಗಿ ಹಣ ನೀಡುವ ಕೆಲಸವನ್ನು ಅವರು ಮಾಡಲಿ ಎಂದು ಸವಾಲು ಎಸೆದರು.