ಹರಿಯಣ,ಅ 28 (DaijiworldNews/MS): ಅಪರಾಧಗಳು ಮತ್ತು ಅಪರಾಧಿಗಳನ್ನು ನಿಭಾಯಿಸಲು ರಾಜ್ಯಗಳ ನಡುವೆ ನಿಕಟ ಸಹಕಾರದ ಅಗತ್ಯವಿದೆ ಎಂದ ಪ್ರಧಾನಿ ಮೋದಿ ಪೊಲೀಸರಿಗೆ 'ಒಂದು ರಾಷ್ಟ್ರ, ಒಂದು ಸಮವಸ್ತ್ರ' ಎಂಬ ತಮ್ಮ ಕಲ್ಪನೆಯನ್ನು ಹರಿಯಾಣದ ಸೂರಜ್ಕುಂಡದಲ್ಲಿ ಆರಂಭವಾದ ಎರಡು ದಿನಗಳ 'ಚಿಂತನ ಶಿಬಿರ'ದಲ್ಲಿ ಬಿಚ್ಚಿಟ್ಟಿದ್ದಾರೆ.
"ದೇಶದಾದ್ಯಂತ ಪೊಲೀಸರ ಗುರುತು ಒಂದೇ ಆಗಿದ್ದರೆ ಚೆನ್ನಾಗಿರುತ್ತದೆ ಎಂದು ನಾನು ಬಯಸುತ್ತೇನೆ. ಇದು ಕೇವಲ ನನ್ನ ಆಲೋಚನೆ, ಸಲಹೆಯಾಗಿದ್ದು, ಅದನ್ನು ರಾಜ್ಯಗಳ ಮೇಲೆ ಹೇರಲು ಬಯಸುವುದಿಲ್ಲ. ಆದರೆ ಎಲ್ಲರೂ ಮನಸ್ಸು ಮಾಡಿದರೆ ಇದನ್ನು ಜಾರಿಗೆ ತರುವುದು ಕಷ್ಟವಲ್ಲ.ಇದು ಮುಂದಿನ ಐದು, ಐವತ್ತು ಅಥವಾ 100 ವರ್ಷಗಳಲ್ಲಿ ಆಗಬಹುದು. ಸ್ವಲ್ಪ ಯೋಚಿಸಿ" ಎಂದು ಹೇಳಿದರು.
ಪೊಲೀಸ್ ಇಲಾಖೆಯನ್ನು ಬಲಪಡಿಸಲು, ಉತ್ತಮ ಫಲಿತಾಂಶವನ್ನು ತರಲು ಪೊಲೀಸ್ ಮತ್ತು ಭದ್ರತಾ ಇಲಾಖೆಯನ್ನು ಮಾನವ ಬುದ್ಧಿಮತ್ತೆಯನ್ನು ಉತ್ಪಾದಿಸುವ ಹಳೆಯ ಉತ್ತಮ ವ್ಯವಸ್ಥೆಯನ್ನು ಬಲಪಡಿಸಬೇಕು. ಮಾತ್ರವಲ್ಲದೆ ಹಳೆಯ ಕಾನೂನುಗಳನ್ನು ಪರಿಶೀಲಿಸಬೇಕು ಮತ್ತು ಪ್ರಸ್ತುತ ಸಂದರ್ಭಕ್ಕೆ ತಿದ್ದುಪಡಿ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.