ಹುಬ್ಬಳ್ಳಿ, ಅ 27 (DaijiworldNews/MS): ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮಾನ ಮರ್ಯಾದೆ ಜೈಲ್, ಬೇಲು ಇಲ್ಲದಂತಾಗಿದೆ. ಇವರು ಬಸ್ ಸ್ಟಾಂಡ್ ಬಸವೆಯರ ತರಹ ಆಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ 12 ಜನ ’ವಿಡಿಯೋ ’ ಸಲುವಾಗಿ ಬೇಲ್ ತೆಗೆದುಕೊಂಡಿದ್ದಾರೆ. . ಕರ್ನಾಟಕದಲ್ಲಿ ಈ ರೀತಿಯ ಪ್ರಕರಣಗಳೇ ಹೆಚ್ಚಾಗುತ್ತಿದೆ. ಇವರಷ್ಟೇ ಅಲ್ಲದೇ ಇನ್ನು ಹಲವಾರು ನಾಯಕರು ಹಾಗೂ ಶಾಸಕರ ಸಿಡಿ ಬಿಡುಗಡೆಯಾಗದಂತೆ ಕೋರ್ಟ್ ನಿಂದ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ಇವರಿಗೆ ಮಾನ ಮಾರ್ಯಾದೆ ಯಾವುದು ಇಲ್ಲ. ಆದರೆ ನಮಗೆ ಸ್ಥಾನ ಇಲ್ಲ ಮಾನ ಇದೆ ಎಂದು ಹೇಳಿದ್ದಾರೆ.
ಬಸವಾದಿ ಶರಣರು, ಕನಕದಾಸರು, ಸೂಫಿ ಸಂತರು ಕಟ್ಟಿದ ನಾಡಿದು. ಇಂತಹ ನಾಡಿನಲ್ಲಿ ಏನೆಲ್ಲಾ ನಡೆದಿದೆ. ಇನ್ನೂ ಏನೇನು ನೋಡಬೇಕು ಕೇಳಬೇಕು ಎಂದು ಬೇಸರ ವ್ಯಕ್ತಪಡಿಸಿದ ಅವರು 1995 ಕಾಲದ ರಾಜಕೀಯ ಮತ್ತೆ ಕರ್ನಾಟಕದಲ್ಲಿ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.