ನವದೆಹಲಿ, ಅ 25 (daijiworldNews/HR): ದೇಶಾದ್ಯಂತ ಆಧಾರ್ ಮೂಲಕ ಪಡಿತರವನ್ನ ತೆಗೆದುಕೊಳ್ಳಬಹುದು ಎಂದು ಆಧಾರ್ ನೀಡುವ ಸಂಸ್ಥೆಯಾದ ಯುಐಡಿಎಐ ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಯುಐಡಿಎಐ, ಈಗ ನೀವು ಆಧಾರ್ ಮೂಲಕ ಇಡೀ ದೇಶದಲ್ಲಿ ಎಲ್ಲಿ ಬೇಕಾದರೂ ಪಡಿತರವನ್ನ ತೆಗೆದುಕೊಳ್ಳಬಹುದು. ಆದರೆ ಇದಕ್ಕಾಗಿ ನಿಮ್ಮ ಆಧಾರ್ ನವೀಕರಿಸುವುದು ಅವಶ್ಯಕ ಎಂದಿದೆ.
ಒನ್ ನೇಷನ್ ಒನ್ ಆಧಾರ್ ಕಾರ್ಯಕ್ರಮದ ಮೂಲಕ ನೀವು ಆಧಾರ್ ಕಾರ್ಡ್ನಿಂದ ದೇಶಾದ್ಯಂತ ಪಡಿತರವನ್ನ ತೆಗೆದುಕೊಳ್ಳಬಹುದಾಗಿದ್ದು, ಇದಕ್ಕಾಗಿ ಹತ್ತಿರದ ಆಧಾರ್ ಕೇಂದ್ರವನ್ನ ಸಂಪರ್ಕಿಸಿ ನಿಮ್ಮ ಆಧಾರ್ ಕಾರ್ಡ್ ನವೀಕರಿಸಲು ನಿಮ್ಮ ಹತ್ತಿರದ ಆಧಾರ್ ಕೇಂದ್ರವನ್ನ ನೀವು ಸಂಪರ್ಕಿಸಬಹುದು.
ಇನ್ನು ಅಧಿಕೃತ ವೆಬ್ಸೈಟ್ https://bhuvan.nrsc.gov.in/aadhaar/ ಮೂಲಕ ಒಬ್ಬರು ಆಧಾರ್ ಕೇಂದ್ರವನ್ನು ಕೂಡ ಸಂಪರ್ಕಿಸಬಹುದು.