ರಾಂಚಿ, ಅ 25 (daijiworldNews/HR): ದೀಪಾವಳಿಯನ್ನು ಸಂಭ್ರಮದಲ್ಲಿದ್ದ ಬಸ್ ಚಾಲಕ ಮತ್ತು ಕಂಡಕ್ಟರ್ ತಮ್ಮ ಪ್ರಾಣ ಕಳೆದುಕೊಂಡಿರುವ ಘಟನೆ ರಾಂಚಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮೃತರನ್ನು ಮದನ್ ಮತ್ತು ಖಲಾಸಿ ಇಬ್ರಾಹಿಂ ಎಂದು ಗುರುತಿಸಲಾಗಿದೆ.
ಹಬ್ಬ ಆಚರಿಸಲೆಂದು ಬಸ್ನಲ್ಲಿ ಪೂಜೆ ಮಾಡಿ ದೀಪ ಹಚ್ಚಿದ್ದು, ರಾತ್ರಿಯಾದ ಕಾರಣ ಅವರು ಬಸ್ನಲ್ಲೇ ಮಲಗಿದ್ದರು. ಈ ವೇಳೆ ಬಸ್ನಲ್ಲಿ ಹಚ್ಚಿಟ್ಟಿದ್ದ ದೀಪದಿಂದ ಬಸ್ಗೆಬೆಂಕಿ ತಗುಲಿದ್ದು, ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಇನ್ನು ಬಸ್ನಲ್ಲಿ ಮಲಗಿದ್ದ ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ಕೂಡ ಸಜೀವ ದಹನವಾಗಿದ್ದಾರೆ.