ತುಮಕೂರು, ಅ 25 (daijiworldNews/HR): 2023ಕ್ಕೆ ಎಲ್ಲ ಒಕ್ಕಲಿಗರಿಗೂ ಮೀಸಲಾತಿ ತರದಿದ್ದರೆ ನಾನು ನಿಮಗೆ ಮುಖತೋರಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೆಂಪೇಗೌಡರಂತೆ ಸರ್ವಜನಾಂಗದವರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಒಕ್ಕಲಿಗರಿಗೆ ಒಬಿಸಿ ಮೀಸಲಾತಿ ನೀಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದು, 2023ಕ್ಕೆ ಎಲ್ಲ ಒಕ್ಕಲಿಗರಿಗೂ ಮೀಸಲಾತಿ ತರದಿದ್ದರೆ ನಾನು ನಿಮಗೆ ಮುಖತೋರಿಸಲ್ಲ ಎಂದರು.
ಇನ್ನು 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದರೂ ಒಕ್ಕಲಿಗರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಲಾಗಲಿಲ್ಲ. ಜನರು ಆಶೀರ್ವಾದ ಮಾಡಿದರೆ 2023ಕ್ಕೆ ತಾಯಿ ಹೃದಯದ ಸರ್ಕಾರ ಕೊಡುತ್ತೇನೆ ಎಂದು ಹೇಳಿದ್ದಾರೆ.