ಹುಬ್ಬಳ್ಳಿ, ಅ 24 (DaijiworldNews/HR): ಭಾರತ್ ಜೊಡೋ ಇದೀಗ ಕಾಂಗ್ರೆಸ್ ತೊಡೋ ಯಾತ್ರೆ ಆಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಯಾರೋ ಬರೆದುಕೊಟ್ಟಿದ್ದನ್ನು ಓದುತ್ತಾರೆ. ಓದುವುದನ್ನು ಕೂಡ ಅವರು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ, ಅದೇ ಅವರ ಸಮಸ್ಯೆ ಎಂದರು.
ಇನ್ನು ಭಾರತ್ ಜೊಡೋ ಇದೀಗ ಕಾಂಗ್ರೆಸ್ ತೊಡೋ ಯಾತ್ರೆ ಆಗುತ್ತಿದ್ದು, ಹಲವರು ಕಾಂಗ್ರೆಸ್ ಚೋಡೋ ಮಾಡುತ್ತಿದ್ದಾರೆ. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟಿದ್ದಕ್ಕೆ ಭಾರತ್ ಜೋಡೋ ಮಾಡಿ. ಚೀನಾಗೆ ಭೂಮಿ ಕೊಟ್ಟಿದ್ದರ ಬಗ್ಗೆ ಮಾಡಿ. ಆದರೆ ನೀವು ತೋಡೋ ಮಾಡಿದವರ ಪಾರ್ಟಿಯವರಾಗಿದ್ದೀರಿ ಎಂದು ಹೇಳಿದ್ದಾರೆ.