ಶ್ರೀನಗರ, ಅ 23 (DaijiworldNews/DB): ನಾವು ಗಡಿಯಲ್ಲಿದ್ದೇವೆ, ನೀವು ಚಿಂತಿಸದೆ ನಿಮ್ಮ ಕುಟುಂಬದೊಂದಿಗೆ ಹಬ್ಬ ಆಚರಣೆ ಮಾಡಿ..ಇದು ದೇಶರಕ್ಷಕ ಸೈನಿಕರು ದೇಶವಾಸಿಗಳಿಗೆ ದೀಪಾವಳಿ ಆಚರಣೆಗಾಗಿ ನೀಡಿದ ಭರವಸೆ.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಿಯೋಜಿಸಲಾದ ಸೇನಾ ಸೈನಿಕರು ಶನಿವಾರ ದೀಪ ಬೆಳಗಿಸಿ ಪಟಾಕಿ ಸಿಡಿಸಿ ದೀಪಾವಳಿ ಆಚರಣೆ ಮಾಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನಲ್ ಇಕ್ಬಾಲ್ ಸಿಂಗ್ , ದೇಶವಾಸಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದು, ನಾವು ಗಡಿಯಲ್ಲಿ ಜಾಗೃತರಾಗಿದ್ದೇವೆ. ನೀವೆಲ್ಲರೂ ನಿಶ್ಚಿಂತೆಯಿಂದ ದೀಪಾವಳಿ ಆಚರಿಸಿ, ಸಂತೋಷದಿಂದ ಹಬ್ಬ ಆಚರಿಸಿ, ಕುಟುಂಬದೊಂದಿಗೆ ಸಂಭ್ರಮಿಸಿ ಎಂದರು.
ಧನ್ ತೇರಸ್ ಅಂಗವಾಗಿ ಭಾರತೀಯ ಸೈನಿಕರು ಲಕ್ಷ್ಮಿ, ಗಣೇಶ ಆರತಿ ಹಾಡು ಹಾಡಿ ಪೂಜೆ ನೆರವೇರಿಸಿದರು.