ಕೇರಳ, ಅ 23 (daijiworldNews/HR): ಕೇರಳವು ಡ್ರಗ್ಸ್ ರಾಜಧಾನಿಯಾಗುವತ್ತ ಸಾಗುತ್ತಿದೆ ಎಂದು ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಜ್ಯದ ಆದಾಯದ ಎರಡು ಮುಖ್ಯ ಮೂಲಗಳು ಲಾಟರಿ ಮತ್ತು ಮದ್ಯ ಎಂಬುದು ನಾಚಿಕೆಯಾಗುವ ಸಂಗತಿಯಾಗಿದೆ ಎಂದರು.
ಇನ್ನು ವಿಶ್ವವಿದ್ಯಾನಿಲಯಗಳಿಗೆ ನೇಮಕಾತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಎಡಪಂಥೀಯ ಕಮ್ಯುನಿಸ್ಟ್ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಖಾನ್, ಎಲ್ಲರೂ ಮದ್ಯ ಸೇವನೆಯ ವಿರುದ್ಧ ಪ್ರಚಾರ ಮಾಡುತ್ತಿದ್ದರೆ, ಕೇರಳವು ಅದರ ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ ಹೇಳಿದ್ದಾರೆ.
ನಮ್ಮ ಅಭಿವೃದ್ಧಿಗೆ ಲಾಟರಿ ಮತ್ತು ಮದ್ಯವೇ ಸಾಕು ಎಂದು ನಿರ್ಧರಿಸಿದ್ದೇವೆ. ಶೇ. 100ರಷ್ಟು ಸಾಕ್ಷರತೆ ಹೊಂದಿರುವ ರಾಜ್ಯಕ್ಕೆ ಎಂತಹ ನಾಚಿಕೆಗೇಡಿನ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.