ಮಧ್ಯಪ್ರದೇಶ, ಅ 22 (DaijiworldNews/HR): ಮಧ್ಯಪ್ರದೇಶದ ಗ್ವಾಲಿಯರ್ ಲೋಕಸಭಾ ಕ್ಷೇತ್ರದ ಸಂಸದ, ಇಂಧನ ಸಚಿವ ಪ್ರದ್ಯುಮ್ನ ಸಿಂಗ್ ತೋಮಾರ್ ಅವರು 'ನನ್ನ ಕ್ಷೇತ್ರದಲ್ಲಿ ಹಾಳಾದ ರಸ್ತೆಗಳೆಲ್ಲ ದುರಸ್ತಿ ಆಗುವವರೆಗೂ ನಾನು ಚಪ್ಪಲಿಯನ್ನಾಗಲಿ, ಶೂ ಆಗಲೀ ಧರಿಸುವುದಿಲ್ಲ, ಗುಂಡಿಬಿದ್ದ, ಹಾಳಾದ ಬರಿಗಾಲಲ್ಲೇ ನಡೆಯುತ್ತೇನೆ' ಎಂದು ಹೇಳಿದ್ದಾರೆ.
ಪ್ರದ್ಯುಮ್ನ ಸಿಂಗ್ ತೋಮಾರ್ ಅವರು ತಮ್ಮ ಲೋಕಸಭಾ ಕ್ಷೇತ್ರ ಗ್ವಾಲಿಯರ್ಗೆ ಆಕಸ್ಮಿಕವಾಗಿ ಭೇಟಿ ಕೊಟ್ಟಿದ್ದು, ಅಲ್ಲಿ ಹಲವು ಕಡೆಗಳಲ್ಲಿ ರಸ್ತೆಗಳೆಲ್ಲ ಹಾಳಾಗಿವೆ. ಗುಂಡಿಗಳು ಬಿದ್ದು, ನಡೆದಾಡಲು ಸಾಧ್ಯವಿಲ್ಲದಂಥ ರಸ್ತೆಗಳೂ ಇದ್ದು, ಅಲ್ಲಿನ ಜನರು ತೊಂದರೆಗಳನ್ನೆಲ್ಲ ಸಚಿವರ ಬಳಿ ಹೇಳಿಕೊಂಡಿದ್ದಾರೆ.
ಇನ್ನು ಜನರ ಸಂಕಷ್ಟ ಕೇಳುತ್ತಿದ್ದಂತೆ ಸಚಿವರು ತಾವು ಧರಿಸಿದ ಚಪ್ಪಲಿ ಬಿಚ್ಚಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿ, 'ನಾನು ಈ ರಸ್ತೆಗಳೆಲ್ಲ ಸರಿಯಾಗುವವರೆಗೂ ನಾನು ಚಪ್ಪಲಿಯನ್ನಾಗಲೀ, ಶೂ ಆಗಲೀ ಧರಿಸುವುದಿಲ್ಲ. ಆಗಲೇ ನನಗೂ ಜನರ ನೋವು ಅರ್ಥವಾಗುತ್ತದೆ. ಇಲ್ಲಿ ರಸ್ತೆ ದುರಸ್ತಿ ಕಾಮಗಾರಿ ನಡೆಯುವ ಬಗ್ಗೆ ಪ್ರತಿದಿನ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.