ಲಕ್ನೋ, ಅ 22 (DaijiworldNews/HR): ರೈಲು ಬೋಗಿಯಲ್ಲಿ ನಮಾಝ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿಂತೆ ಸತ್ಯಾಗ್ರಹ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಿಜೆಪಿಯ ಮಾಜಿ ಶಾಸಕ ದೀಪಲಾಲ್ ಭಾರತಿ ದೂರು ದಾಖಲಿಸಿದ್ದಾರೆ.
ನಮಾಝ್ ಮಾಡಿರುವುದನ್ನು ದೀಪಲಾಲ್ ಭಾರತಿ ಅವರು ವಿಡಿಯೋ ಮಾಡಿದ್ದು, ಅವರ ಹೇಳಿಕೆಯ ಪ್ರಕಾರ ಖಡ್ಡ ರೈಲ್ವೇ ನಿಲ್ದಾಣದಲ್ಲಿ ರೈಲು ನಿಂತಾಗ ನಾಲ್ವರು ಬೋಗಿಯ ನಡುವಿನ ಸ್ಥಳದಲ್ಲಿ ನಮಾಝ್ ಮಾಡುತ್ತಿದ್ದರು. ಇದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಕೆಲವರು ಕುಳಿತಲ್ಲಿಯೇ ದಿಗ್ಭಂದನಕ್ಕೆ ಒಳಗಾಗಿದ್ದು, ಹೊರ ಹೋಗುವ, ಒಳ ಬರುವ ಪ್ರಯಾಣಿಕರಿಗೆ ಅಡಚಣೆಯಾಗಿತ್ತು ಎಂದಿದ್ದಾರೆ.
ಇನ್ನು ಪ್ರಯಾಣಿಕರ ಸಂಚಾರವನ್ನು ನಿರ್ಬಂಧಿಸಿ ನಮಾಝ್ ಮಾಡಲು ಅನುಮತಿ ನೀಡಿದವರು ಯಾರು. ನಾನು ನಮಾಝ್ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದೇನೆ. ತಕ್ಷಣವೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ, ದೂರನ್ನು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.