ಬೆಂಗಳೂರು, ಅ 22 (DaijiworldNews/HR): ರಾಹುಲ್ ಗಾಂಧಿಯವರ ತಾಳ್ಮೆ, ಪರಿಶ್ರಮ, ದೃಢ ಸಂಕಲ್ಪಕ್ಕೆ ನನ್ನದೊಂದು ಸಲಾಂ ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರೊಂದಿಗೆ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಸಾಗುತ್ತಿರುವ ಪೋಟೊ ಹಂಚಿಕೊಂಡಿರುವ ಸಿದ್ದರಾಮಯ್ಯ, ನಡೆದಷ್ಟೂ ಹಿಗ್ಗುತ್ತಿರುವ ರಾಹುಲ್ ಅವರ ಉತ್ಸಾಹ, ನೊಂದ ಜನರನ್ನು ಅವರು ಸಂತೈಸಿ, ಬದುಕಿನ ಭರವಸೆ ತುಂಬುವ ರೀತಿ, ದೇಶದ ಬಗೆಗಿನ ಬದ್ಧತೆ, ಕಾಳಜಿ ಇವು ಅವರನ್ನು ಓರ್ವ ಪರಿಪೂರ್ಣ ನಾಯಕನನ್ನಾಗಿಸಿದೆ ಎಂದಿದ್ದಾರೆ.
ಇನ್ನು ರಾಯಚೂರು ಜಿಲ್ಲೆಯಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿರುವ ರಾಹುಲ್ ಗಾಂಧಿ ಅವರ ನೃತೃತ್ವದ ಭಾರತ್ ಜೋಡೊ ಯಾತ್ರೆ ಸದ್ಯ ಯರೇಗಾ ಗ್ರಾಮದಿಂದ ಆರಂಭವಾಗಿದ್ದು, ರಾಹುಲ್ ಅವರೊಂದಿಗೆ ಸಿದ್ದರಾಮಯ್ಯ ಕೂಡ ಹೆಜ್ಜೆ ಹಾಕಿದ್ದಾರೆ.