ಶ್ರೀನಗರ, ಅ 21 (DaijiworldNews/DB): ಸರ್ಕಾರಿ ಬಂಗಲೆ ತೊರೆಯುವಂತೆ ಕಾಶ್ಮೀರದ ಫೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.
ಶ್ರೀನಗರದಲ್ಲಿರುವ ಫೇರ್ವ್ಯೂ ಸಕಾಧರಿ ಬಂಗಲೆಯಲ್ಲಿ ವಾಸವಾಗಿರುವ ಮುಫ್ತಿ ಅವರಿಗೆ ಬಂಗಲೆ ತೊರೆಯುವಂತೆ ನೋಟಿಸ್ ನೀಡಲಾಗಿದೆ. ಇದನ್ನು ಸ್ವತಃ ಮುಫ್ತಿ ಅವರೇ ಸುದ್ದಿಸ<ಸ್ಥೆಯೊಂದಕ್ಕೆ ಸ್ಪಷ್ಟಪಡಿಸಿದ್ದಾರೆ.
ಇನ್ನು ಕೇಂದ್ರ ಸರ್ಕಾರವನ್ನು ಹಲವಾರು ಬಾರಿ ಮುಫ್ತಿ ಟೀಕಿಸಿದ್ದು, ಇದೇ ಕಾರಣಕ್ಕೆ ಸರ್ಕಾರಿ ಬಂಗಲೆ ತೊರೆಯುವಂತೆ ಅವರಿಗೆ ನೋಟಿಸ್ ನೀಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಅಧಿಕಾರದಿಂದ ಬಿಜೆಪಿಯನ್ನು ದೂರವಿಟ್ಟರೆ ಸ್ವಾತಂತ್ರ್ಯ ಹೋರಾಟಕ್ಕಿಂತಲೂ ದೊಡ್ಡ ಕೆಲಸ ಅದಾಗಲಿದೆ ಎಂದಿದ್ದರು. ಅಲ್ಲದೆ, ಕಾಶ್ಮೀರ ಪ್ರತ್ಯೇಕವಾದಿ ನಾಯಕ ಯಾಸಿನ್ ಭಟ್ಕಳ್ಗೆ ಜೈಲು ಶಿಕ್ಷೆ ವಿಧಿಸಿದ್ದನ್ನೂ ಖಂಡಿಸಿದ್ದರು. ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಕಾಶ್ಮೀರದಲ್ಲಿ ಇನ್ನಷ್ಟು ಹಿಂಸೆಗಳು ನಡೆಯಲಿವೆ ಎಂದಿದ್ದರು. ಆರ್ಟಿಕಲ್ 370 ರದ್ದತಿಗೂ ಮುಫ್ತಿ ವಿರೋಧ ವ್ಯಕ್ತಪಡಿಸಿದ್ದರು. ಆರ್ಟಿಕಲ್ 370 ರದ್ದತಿ ಬಳಿಕ ಮುಫ್ತಿ ಅವರನ್ನು ಕೆಲ ತಿಂಗಳ ಕಾಲ ಗೃಹ ಬಂಧನದಲ್ಲಿ ಇರಿಸಲಾಗಿತ್ತು.