ಬೆಂಗಳೂರು, ಅ 21 (DaijiworldNews/HR): ಅಲ್ಕಾಯಿದಾ ಮತ್ತು ಬಾಂಗ್ಲಾದೇಶದ ಅಸಾರುಲ್ಲಾ ಬಾಂಗ್ಲಾ ಟೀಂ(ಎಬಿಟಿ) ಸದಸ್ಯರೊಂದಿಗೆ ಪಿಎಫ್ಐಯ ಬಂಧಿತ 7 ಮಂದಿ ಸಂಪರ್ಕ ಹೊಂದಿದ್ದರು ಎಂದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಸೆ.22ರಂದು ಬೆಂಗಳೂರಿನಲ್ಲಿ ಪಿಎಫ್ ಐನ ಅನೀಫ್ ಅಹ್ಮದ್, ಅಫ್ಸರ್ ಪಾಷಾ, ಅಬ್ದುಲ್ ವಹಿದ್ ಸೇಠ್, ಯಾಸೀರ್ ಅರ್ಫತ್ ಹಸನ್, ಮೊಹಮ್ಮದ್ ಶಾಕೀರ್ ಅಲಿಯಾಸ್ ಶಾಕೀಫ್, ಮೈಸೂರಿನ ಮೊಹಮ್ಮದ್ ಫಾರೂಕ್ ಉರ್ ರೆಹಮಾನ್, ಕಲಬುರಗಿಯ ಶಾಹಿದ್ ನಾಸೀರ್ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಪೈಕಿ ಬೆಂಗಳೂರಿನ ಆರ್.ಟಿ.ನಗರದ ಯಾಸೀರ್ ಅರ್ಫತ್ ಅಲಿಯಾಸ್ ಯಾಸೀರ್ ಹಸನ್ನನ್ನು ಹೆಚ್ಚಿನ ವಿಚಾರಣೆಗೆ ದಿಲ್ಲಿಗೆ ಕರೆದೊಯ್ಯಲಾಗಿತ್ತು.
ಇನ್ನು ಜೆಹಾದಿಗಾಗಿ ಹಣ ಸಂಗ್ರಹ ಬಂಧಿತ ಯಾಸೀರ್ ಅರ್ಫತ್ ಜತೆಗೆ 7 ಮಂದಿ ಜೆಹಾದಿಗಾಗಿ ಹಣ ಸಂಗ್ರಹಿಸುತ್ತಿದ್ದು, ಅದರ ಮೂಲಕ ಶೋಧಿಸಿದಾಗ, ಅಸ್ಸಾಂ, ಪಶ್ಚಿಮ ಬಂಗಾಲ ಮೂಲದ ಶಂಕಿತರಿಗೆ ಅಲ್ ಖೈದಾ ಮತ್ತು ಎಬಿಟಿ ಸಂಘಟನೆ ಸದಸ್ಯರು ಆರ್ಥಿಕ ನೆರವು ನೀಡುತ್ತಿದ್ದು, ಅದನ್ನು ರಾಜ್ಯಕ್ಕೂ ಹಂಚಿದ್ದಾರೆ ಎಂದು ತಿಳಿದು ಬಂದಿದೆ.