ನವದೆಹಲಿ,ಅ 21 (DaijiworldNews/HR): ನಾನು ಅಸಮಾಧಾನಗೊಂಡಿಲ್ಲ, ಪಕ್ಷವು ನನ್ನ ಎದುರಾಳಿಯ ತೆಕ್ಕೆಗೆ ಬೀಳುತ್ತದೆ ಎಂಬುದು ಮೊದಲಿನಿಂದಲೂ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಬಳಿಕ ಮಾತನಾಡಿದ ಅವರು ಪಕ್ಷವು ಖರ್ಗೆಯವರ ಪಾಲಿಗೇ ಸೇರುತ್ತದೆಯೆಂದು ಮೊದಲೇ ತಿಳಿದಿದ್ದರಿಂದ ಯಾವುದೇ ರೀತಿಯ ಅಸಮಾಧಾನವಾಗಿಲ್ಲ ಎಂದರು.
ಇನ್ನು ನಾನು ಅಸಮಾಧಾನಗೊಂಡಿಲ್ಲ, ಸೋನಿಯಾ ಗಾಂಧಿಯವರೊಂದಿಗೆ ಮಾತನಾಡಿದ್ದೇನೆ ಮತ್ತು ಪಕ್ಷದ ಹೆಚ್ಚಿನ ಸದಸ್ಯರು ತಮ್ಮದೇ ಆದ ಒಬ್ಬರನ್ನು ಬೆಂಬಲಿಸುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಒಟ್ಟೂ 9,385 ಮತಗಳ ಪೈಕಿ ಖರ್ಗೆ 7,897 ಮತಗಳನ್ನು ಪಡೆದಿದ್ದು ತರೂರ್ಗೆ 1,072 ಮತಗಳು ಬಿದ್ದಿತ್ತು. ಒಟ್ಟು 416 ಮತಗಳು ಅಸಿಂಧುವಾಗಿವೆ.