ಉತ್ತರ ಪ್ರದೇಶ, ಅ 20 (DaijiworldNews/DB): ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಗುಂಡಿನ ದಾಳಿಯಿಂದಾಗಿ ಮಹಿಳೆ ಸೇರಿದಂತೆ ಮೂವರು ಗಾಯಗೊಂಡ ಘಟನೆ ನಡೆದಿದೆ.
ಮೀರತ್ನ ಗಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗುರ್ಜರ್ ಚೌಕ್ನಲ್ಲಿ ಘಟನೆ ನಡೆದಿದ್ದು, ರಸ್ತೆಯಲ್ಲಿ ನಿಂತುಕೊಂಡು ವ್ಯಕ್ತಿ ಗುಂಡು ಹಾರಿಸಿ ಬಳಿಕ ಪರಾರಿಯಾಗಿದ್ದಾನೆ. ಶಂಕಿತ ಆರೋಪಿಯನ್ನು ಶಿವಂ ಎಂದು ಗುರುತಿಸಲಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ತನ್ನ ತಂದೆ-ತಾಯಿ ಅಂಗಡಿಯಲ್ಲಿ ಕುಳಿತಿದ್ದಾಗ ಅಪರಿಚಿತನೊಬ್ಬ ಬಂದು ಗುಂಡು ಹಾರಿದ್ದಾನೆ. ತಾಯಇಯ ತೊಡೆಗಳಿಗೆ ಗುಂಡು ತಾಗಿದೆ. ತಾಯಿಯನ್ನು ರಕ್ಷಿಸಲು ಹೋದ ತಂದೆಯ ಭುಜಕ್ಕೆ ಗುಂಡು ತಗುಲಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಾಯಾಳುಗಳ ಪುತ್ರ ತಿಳಿಸಿರುವುದಾಗಿ ವರದಿಯಾಗಿದೆ. ಗುಂಡಿನ ದಾಳಿಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.