ಶ್ರೀನಗರ, ಅ 20 (DaijiworldNews/HR): ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಐವರು ಭೂಗತ ಕೆಲಸಗಾರರನ್ನು ಬಂಧಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಐವರು ಭೂಗತ ಕೆಲಸಗಾರರನ್ನು ಫಾಗು ಡೋಲಿಗಾಂನ ನಜೀರ್ ಅಹ್ಮದ್ ಪಾಲಾ, ಪೊಗಲ್ ಕುಂದದ ಮೊಹಮ್ಮದ್ ಉಸ್ಮಾ ಬಾನ್ಲಿ, ಕ್ರಾವಾದ ಫಿರ್ದಿಯಸ್ ಅಹ್ಮದ್ ಖಾನ್, ತೇಥಾರ್ನ ಅಬ್ದುಲ್ ಹಮೀದ್ ಖಾನ್ ಮತ್ತು ಗುಂಡ್ ಅಡಲ್ಕೂಟದ ಅನ್ಯತುಲ್ಲಾ ವಾನಿ ಎಂದು ಗುರುತಿಸಲಾಗಿದೆ.
ಇನ್ನು ಪೊಲೀಸರು ಐವರನ್ನು ಅವರ ಚಟುವಟಿಕೆಗಳ ದಾಖಲೆಗಳೊಂದಿಗೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.