ರಾಯಚೂರು, ಅ 20 (DaijiworldNews/HR): ರಾಯಚೂರಿನ ಮುದಗಲ್ ಪಟ್ಟಣದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.
ಚಿನ್ನಾಭರಣ ವ್ಯಾಪಾರಿ ಶ್ರವಣ್ ಜೈನ್ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಇನ್ನು ಪಟ್ಟಣದ ಲಿಂಗಸೂಗೂರು ರಸ್ತೆಯ ಕೆಇಬಿ ಮುಂಭಾಗದ ಎಂಕೆ ಜ್ಯುವೆಲರಿ ಶಾಪ್ ಮಾಲೀಕ ಶ್ರವಣ್ ಜೈನ್ ನಿತ್ಯ ರಾತ್ರಿ ಮನೆಗೆ ಆಭರಣಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಈ ಬಗ್ಗೆ ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.