ನವದೆಹಲಿ, ಅ 20 (DaijiworldNews/DB): ಕಾಂಗ್ರೆಸ್ನಲ್ಲಿ ಸೋನಿಯಾ ಗಾಂಧಿ ಅವರ ಮಾತೇ ಅಂತಿಮ ಎಂಬುದು ಖರ್ಗೆಯವರ ಭಾರೀ ಅಂತರದ ಆಯ್ಕೆಯಿಂದ ಗೊತ್ತಾಗುತ್ತದೆ ಎಂದು ಕಾಂಗ್ರೆಸ್ನ ಮಾಜಿ ನಾಯಕ ಅಶ್ವನಿಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾರೀ ಅಂತರದಿಂದ ಆಯ್ಕೆಯಾಗಿದ್ದಾರೆ. ಪಕ್ಷದಲ್ಲಿ ಸೋನಿಯಾ ಮಾತೇ ಅಂತಿಮ ಎಂಬುದು ಇದರಿಂದ ಮನದಟ್ಟಾಗುತ್ತದೆ. ಅವರು ಪಕ್ಷದಲ್ಲಿ ಸಕ್ರಿಯರಾಗಿ ಇರುವವರೆಗೆ ಅವರ ಮಾತೇ ಮುಖ್ಯ ಎಂಬ ಪರಿಸ್ಥಿತಿ ಪಕ್ಷದಲ್ಲಿ ಇರಲಿದೆ. ಹಲವರು ಗಾಂಧಿ ಕುಟುಂಬಕ್ಕೆ ನಿಷ್ಠೆಯಿಂದ ಇರುವುದು ಇದಕ್ಕೆ ಕಾರಣ ಎಂದರು.
ಚುನಾವಣೆಯನ್ನು ಬಳಸಿಕೊಂಡು ತಮ್ಮ ನಿರ್ಣಯವನ್ನು ಸೋನಿಯಾ ಮತ್ತೆ ಪ್ರದರ್ಶನ ಮಾಡಿದ್ದಾರೆ. ಆದರೆ ಉನ್ನತ ಹುದ್ದೆಗೆ ಸ್ಪರ್ಧಿಸುವ ಸವಾಲು ಸ್ವೀಕರಿಸಿದ ಶಶಿ ತರೂರ್ ಅವರ ನಡೆ ಮೆಚ್ಚುವಂತಹುದಾಗಿದೆ ಎಂದು ಅವರು ತಿಳಿಸಿದರು.
ಚುನಾವಣೆಯಲ್ಲಿ ಸ್ಪರ್ಧಿಸಿರುವ ಶಶಿ ತರೂರ್ ಅಧ್ಯಕ್ಷ ಸ್ಥಾನಕ್ಕೇರುವಲ್ಲಿ ವಿಫಲವಾಗಿದ್ದಾರೆ. ಆದರೆ ಅವರು ಸೋತಿಲ್ಲ. ಚುನಾವಣೆ ಪ್ರಕ್ರಿಯೆಯೇ ಅವರಿಗೆ ವಿಜಯವಾಗಿದೆ ಎಂದರು.