ಇಂದೋರ್, ಅ 20 (DaijiworldNews/DB): ಕಿರುತೆರೆ ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಇಂದೋರ್ ಪೊಲೀಸರು ಬಂಧಿಸಿದ್ದಾರೆ.
ರಾಹುಲ್ ನವ್ಲಾನಿ ಬಂಧಿತ ಆರೋಪಿ. ಇಂದೋರ್ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವೇಳೆಯೇ ಆತನನ್ನು ಬಂಧಿಸಲಾಗಿದೆ. ಈತನಿಂದ ಮೊಬೈಲ್ ಫೋನ್ ಮತ್ತು ಇತರ ಸಾಧನಗಳನ್ನು ಇದೇ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಹುಲ್ ನವ್ಲಾನಿ ಮತ್ತು ಆತನ ಪತ್ನಿ ದಿಶಾ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಎದುರಿಸುತ್ತಿದ್ದು. ವೈಶಾಲಿ ಸಾವಿಗೂ ಮುನ್ನ ಬರೆದ ಐದು ಪುಟಗಳ ಡೆತ್ನೋಟ್ನಲ್ಲಿ ರಾಹುಲ್ ನವ್ಲಾನಿ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದರು. ಹೀಗಾಗಿ ಪೊಲೀಸರು ರಾಹುಲ್ ದಂಪತಿಗಾಗಿ ಹುಡುಕುತ್ತಿದ್ದು, ಅವರ ಹೆಸರಿನಲ್ಲಿ ಲುಕ್ಔಟ್ ನೋಟಿಸ್ನ್ನೂ ಹೊರಡಿಸಲಾಗಿತ್ತು. ಆರೋಪಿ ದಂಪತಿಯ ಬಗ್ಗೆ ಮಾಹಿತಿ ನೀಡಿದವರಿಗೆ 5 ಸಾವಿರ ರೂ. ಬಹುಮಾನವನ್ನೂ ಇಂದೋರ್ ಪೊಲೀಸ್ ಆಯುಕ್ತರು ಘೋಷಿಸಿದ್ದರು.
ಸದ್ಯ ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಆತನಿಂದ ವಶಪಡಿಸಿಕೊಳ್ಳಲಾದ ಗ್ಯಾಜೆಟ್ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆದರೆ ಇದೇ ವೇಳೆ ಆತನ ಪತ್ನಿಯನ್ನು ಬಂಧಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.