ಬೆಂಗಳೂರು, ಅ 19 (DaijiworldNews/HR): ಅಭಿವೃದ್ಧಿಯಲ್ಲಿ ಕುರುಡಾಗಿರುವ ಸರ್ಕಾರ, ಪ್ರಶ್ನೆಗಳಿಗೆ ಕಿವುಡಾಗಿರುವ ಸಚಿವರು ತಮ್ಮದೇ ಭರವಸೆಗಳ ಬಗ್ಗೆ ಮತನಾಡುವರೇ? ಸಿಎಂ ಉತ್ತರಿಸುವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದ ಎಷ್ಟು ಭರವಸೆ ಈಡೇರಿಸಿದೆ ಎಂದು ಪ್ರಶ್ನಿಸಲು ಪೇ ಸಿಎಂ ಜೊತೆಗೆ ‘ಸೇ-ಸಿಎಂ’ (ಹೇಳಿ ಸಿಎಂ) ಅಭಿಯಾನ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದ ಕಾಂಗ್ರೆಸ್ ಇದೀಗ ಹಲವು ಪ್ರಶ್ನೆಗಳನ್ನು ಮುಂದಿಟ್ಟು ‘ಸೇ-ಸಿಎಂ’’ ಅಭಿಯಾನ ಆರಂಭಿಸಿ ಟ್ವೀಟ್ ಮಾಡಿದ್ದು, ಬಿಜೆಪಿ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ತಾವು ಪಡೆಯುವ ಕಮಿಷನ್ನಿನ ಶೇಕಡಾದಷ್ಟಾದರೂ ಈಡೇರಿಸಿದ್ದರೆ ಸಾಕಿತ್ತು. ಕಮಿಷನ್ 40% ಆದರೆ ಈಡೇರಿಸದೆ ಉಳಿದ ಭರವಸೆಗಳು 90% ಎಂದಿದೆ.
ಬೊಮ್ಮಾಯಿ ಅವರೇ, ನಿಮ್ಮ ಮಾತಿಗೆ ಅಳಬೇಕೊ ನಗಬೇಕೋ ತಿಳಿಯುತ್ತಿಲ್ಲ. ದಾಖಲೆ ಇದ್ದರೆ ಸಿಐಡಿಗೋ, ಐಟಿ, ಇಡಿ, ಸಿಬಿಐಗೋ ಕೊಡದೇ ರಾಹುಲ್ ಗಾಂಧೀಯ ಒಪ್ಪಿಗೆಗೆ ಕಾಯುತ್ತಿದ್ದೀರಾ? ಸಿದ್ದರಾಮಯ್ಯ ಅವರಎಲ್ಲಾ ನೇಮಕಾತಿಗಳನ್ನು, ಹಗರಣಗಳನ್ನೂ ತನಿಖೆಗೆ ಒಪ್ಪಿಸಿ ಎಂದು ಅಂದೇ ಹೇಳಿಲ್ಲವೇ? ಯಾಕೆ ದಮ್ಮು ತಾಕತ್ತು ಇಲ್ಲವೇ? ಎಂದು ಪ್ರಶ್ನಿಸಿದೆ.