ಭೋಪಾಲ್, ಅ 19 (DaijiworldNews/HR): ರಾಮನವಮಿ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಆದ ಹಾನಿಗೆ ಪರಿಹಾರವಾಗಿ 12 ವರ್ಷದ ಬಾಲಕನೊಬ್ಬನಿಗೆ 2.9 ಲಕ್ಷ ರೂಪಾಯಿ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.
ಮಧ್ಯಪ್ರದೇಶದ ಖರ್ಗೋನ್ನಲ್ಲಿ ಎಪ್ರಿಲ್ 10 ರಂದು ರಾಮನವಮಿ ಮೆರವಣಿಗೆ ವೇಳೆ ಗುಂಪು ಘರ್ಷಣೆ ನಡೆದು ಹಲ್ಲೆ ನಡೆಸಲಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳುಮಾಡಲಾಗಿತ್ತು ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿ ಬಾಲಕ ಹಾಗೂ ಆತನ ಕುಟುಂಬಕ್ಕೆ ನೋಟಿಸ್ ಜಾರಿ ಮಾಡಿದೆ.
ಬಾಲಕನ ತಂದೆಗೂ ನಷ್ಟ ಪರಿಹಾರಕ್ಕೆ 4.8 ಲಕ್ಷ ರೂಪಾಯಿ ಪಾವತಿಸುವಂತೆ ರಾಜ್ಯ ಕ್ಲೇಮ್ ನ್ಯಾಯಾಧಿಕರಣ ನೋಟಿಸ್ ಜಾರಿಗೊಳಿಸಿದ್ದು, ಬಾಲಕನ ತಂದೆ ಕೂಲಿ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಬಾಲಕನ ತಾಯಿ ಹೇಳಿಕೆಯಂತೆ ತನ್ನ ಮಗ ಅಂದು ಮನೆಯಲ್ಲೇ ಇದ್ದ ನಾವೆಲ್ಲರೂ ಮನೆಯಲ್ಲಿ ಮಲಗಿದ್ದೆವು ನಾವೇನು ತಪ್ಪು ಮಾಡಲಿಲ್ಲ ಎಂದು ಹೇಳಿದ್ದಾರೆ.