ಶ್ರೀನಗರ, ಅ 18 (DaijiworldNews/DB): ಭಯೋತ್ಪಾದಕರು ಗ್ರೆನೇಡ್ ಎಸೆದ ಪರಿಣಾಮ ಉತ್ತರ ಪ್ರದೇಶ ಮೂಲದ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಘಟನೆ ಸಂಬಂಧಿಸಿ ನಿಷೇಧಿತ ಲಷ್ಕರ್-ಎ-ತೈಬಾ ಸಂಘಟನೆಯ ಸ್ಥಳೀಯ ಹೈಬ್ರಿಡ್ ಭಯೋತ್ಪಾದಕನನ್ನು ಶೋಧ ಮತ್ತು ಪಹರೆ ಕಾರ್ಯಾಚರಣೆ ಸಂದರ್ಭದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಹೈಬ್ರಿಡ್ ಭಯೋತ್ಪಾದಕರು ದಾಳಿಗಳನ್ನು ನಡೆಸಿ ಯಾವುದೇ ಕುರುಹುಗಳನ್ನೂ ಬಿಡದೆ ದೈನಂದಿನ ಜೀವನಕ್ಕೆ ಮರಳುತ್ತಾರೆ. ಇಂತಹ ದಾಳಿ ವೇಳೆ ಶೋಪಿಯಾನ್ನಲ್ಲಿ ನಾಲ್ವರು ಉಗ್ರರು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಸಾವನ್ನಪ್ಪಿದ್ದಾರೆ. ಪುಲ್ವಾಮದಲ್ಲಿ ಪೊಲೀಸರೊಬ್ಬರು ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರು. ಇನ್ನು ಕಾರ್ಮಿಕನೊಬ್ಬನ ಮೇಲೆ ದಾಳಿ ಮಾಡಿದ ಇಬ್ಬರು ಹೈಬ್ರಿಡ್ ಉಗ್ರರು ಈ ಹಿಂದೆ ಹತರಾಗಿದ್ದಾರೆ. ಶೋಪಿಯಾನ್ನಲ್ಲಿ ಉಗ್ರಗಾಮಿಗಳ ಗುಂಡಿನ ದಾಳಿಗೆ ಕಾಶ್ಮೀರಿ ಪಂಡಿತ್ ಬಲಿಯಾಗಿದ್ದರು.