ಶ್ರೀನಗರ, ಅ 17 (DaijiworldNews/DB): ನ್ಯಾಯ ಸಿಗದೇ ಹೋದರೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಉದ್ದೇಶಿತ ಹತ್ಯೆಗಳು ನಿಲ್ಲದು ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ವಿಭಾಗದ ಜಿಲ್ಲಾ ರಿಯಾಸಿ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, 370ನೇ ವಿಧಿಯಿಂದಾಗಿ ಹತ್ಯೆ ಘಟನೆಗಳು ನಡೆಯುತ್ತಿವೆ ಎಂದು ಅದನ್ನು ತೆಗೆದು ಹಾಕಲಾಯಿತು. ಆದರೂ ಹತ್ಯೆಗಳು ನಡೆಯುತ್ತಲೇ ಇರುವುದಕ್ಕೆ ಯಾರು ಹೊಣೆ? ಎಂದವರು ಪ್ರಶ್ನಿಸಿದರು.
ಕಾಶ್ಮೀರದಲ್ಲಿ ಈಗ ಪರಿಸ್ಥಿತಿ ಉತ್ತಮವಾಗಿದೆ ಎಂದು ಹೇಳುವ ಬಿಜೆಪಿ ಎಲ್ಲಿ ಸುಧಾರಿಸಿದೆ ಎಂಬುದನ್ನು ಹೇಳಬೇಕು? ಕಾಶ್ಮೀರಿ ಪಂಡಿತನನ್ನು ಕೊಲ್ಲಲು ಕಾರಣವೇನು? ಹತ್ಯೆಗಳು ನ್ಯಾಯ ಸಿಗದ ಹೊರತು ಇಲ್ಲಿ ನಿಲ್ಲುವುದಿಲ್ಲ ಎಂದರು.
ಫಾರೂಖ್ ಅಬ್ದುಲ್ಲಾ ಅವರ ಈ ಹೇಳಿಕೆಗೆ ಸದ್ಯ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.