ರಾಯಚೂರು, ಅ 15 (DaijiworldNews/HR): ಸೋರುತಿಹುದು ಕಾಂಗ್ರೆಸ್ ಮನೆಯ ಮಾಳಿಗೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ನವರು ನಡೆಸುತ್ತಿರುವುದು ಭಾರತ್ ಜೋಡೋ ಅಲ್ಲ, ಫ್ಯಾಮಿಲಿ ಪ್ಯಾಕ್ ಪಾದಯಾತ್ರೆ. ಸಿದ್ದರಾಮಯ್ಯ ಹಿಂದೆ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಆಗ ಸೋನಿಯಾ ಗಾಂಧಿ ಬಂದಿದ್ದರಾ? ಬಂಡೆ ಅಂತಿರಲ್ಲ ಅವರು ಕೂಡ ಪಾದಯಾತ್ರೆ ಮಾಡಿದಾಗ ಯಾರೂ ಪಾಲ್ಗೊಂಡಿದ್ದರು? ಇದು ಫ್ಯಾಮಿಲಿ ವರ್ಚಸ್ಸು, ಐಡೆಂಟಿಟಿ ಉಳಿಸಿಕೊಳ್ಳಲು ಮಾಡುತ್ರಿರುವ ಪಾದಯಾತ್ರೆ ಎಂದಿದ್ದಾರೆ.
ಕಾಂಗ್ರೆಸ್ ನವರು ಒಂದು ದಿನ ಕುಟುಂಬ ಬಿಟ್ಟು ಜನತೆ ಜೊತೆ ನಿಂತಿಲ್ಲ. ಇವರ ಪಾದಯಾತ್ರೆ ನೋಡಿದಾಗ ಹಸು, ಕರು ಗುರುತು ಮತ್ತೆ ಬಂದಿದೆ ಎನಿಸುತ್ತದೆ ಎಂದರು.
ಇವತ್ತು ಕಾಂಗ್ರೆಸ್ ಕಾಲದ 20 ಸಚಿವರು ವಿವಿಧ ಕೇಸ್ ಗಳಲ್ಲಿ ಅಲೆದಾಡುತ್ತಿದ್ದು,. ಇವರು ಡೀಲ್ ಮಾಸ್ಟರ್ ಗಳು. ತಾನು ಕಳ್ಳ ಪರರ ಬಂಬ ಎನ್ನುವಂತಾಗಿದೆ ಕಾಂಗ್ರೆಸ್ ನವರ ಸ್ಥಿತಿ ಎಂದು ವಾಗ್ದಾಳಿ ನಡೆಸಿದ್ದಾರೆ.