ಬಾಗಲಕೋಟೆ, ಅ 14 (DaijiworldNews/SM): ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗುವುದಕ್ಕೆ ಅಯೋಗ್ಯವಾದ ವ್ಯಕ್ತಿ. ಬೇರೆ ಪಕ್ಷಗಳ ನಾಯಕರ ಬಗ್ಗೆ ಹಗುರವಾಗಿ ಮಾತಾಡುತ್ತಾರೆ. ತಾನು ಸತ್ಯ ಹರಿಶ್ಚಂದ್ರ ಮೊಮ್ಮಗ ಎಂದು ಭಾವಿಸಿದ್ದಾರೆ. ಆದರೆ ಸಿದ್ದರಾಮಯ್ಯ ಭಸ್ಮಾಸುರ ಇದ್ದ ಹಾಗೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಯಾವ ಪಕ್ಷದಲ್ಲಿದ್ದರೂ ಯಾರನ್ನೂ ಬೆಳೆಯಲು ಬಿಡಲ್ಲ. ಸಿದ್ದರಾಮಯ್ಯ ಬಳಿ ಹೋಗುವವರು ಭಸ್ಮವಾಗುತ್ತಾರೆ. ಅಂತಹ ಭಸ್ಮಾಸುರನನ್ನು ಬಿಜೆಪಿ ಸುಟ್ಟು ಬಿಡುತ್ತೆ ಎಂದು ವಾಗ್ದಾಳಿ ಮಾಡಿದರು. ನರೇಂದ್ರ ಮೋದಿಯಂತ ವ್ಯಕ್ತಿ ಬಗ್ಗೆ ಹಗುರವಾಗಿ ಏಕಚಚನದಲ್ಲಿ ಮಾತಾಡುತ್ತಾರೆ. ನರೇಂದ್ರ ಮೋದಿ ಇವತ್ತು ವಿಶ್ವನಾಯಕ. ಯಕಶ್ವಿತ್ ಸಿದ್ದರಾಮಯ್ಯ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಬಾರದು. ನನಗೂ ಸಿದ್ದರಾಮಯ್ಯಕ್ಕಿಂತ ಕೆಟ್ಟ ಭಾಷೆ ಬರುತ್ತದೆ. ನಾನು ಅದೇ ಜಾತಿಯವನೇ. ನಮ್ಮ ಪಕ್ಷ ಸಂಸ್ಕಾರ ಕೊಟ್ಟಿದೆ. ಮುಖ್ಯಮಂತ್ರಿ ಆದವರಿಗೆ ವಿರೋಧ ಪಕ್ಷದಲ್ಲಿದ್ದವರಿಗೆ ನಾನು ಏಕವಚನದಲ್ಲಿ ಮಾತಾಡೋದಿಲ್ಲ. ಒಳ್ಳೆಯ ರೀತಿ ಮಾತಾಡಿ ಎಂದು ಒಬ್ಬ ಸ್ನೇಹಿತನಾಗಿ ಸಲಹೆ ನೀಡುತ್ತಿದ್ದೇನೆ ಎಂದರು.
ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುದನ್ನ ಬಿಜೆಪಿಯವರು ಕಾಯುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು, ಅವರಿಗೆ ಗತಿ ಇಲ್ಲ. ಅವರ ಜೊತೆ ನಾವು ಏಕೆ ಹೋಗೋಣ. ಚಾಮುಂಡಿಯಲ್ಲಿ ಸೋಲುತ್ತೇನೆ ಅಂದ್ಮೇಲೆ ಬಾದಾಮಿಗೆ ಬಂದರು.
ಯಾವ ವ್ಯಕ್ತಿ ಶಾಸಕ ಆದವರು ಆ ಕ್ಷೇತ್ರದ ಜನ ಮನಸ್ಸು ಗೆಲ್ಲೋಕೆ ಆಗದೇನೆ ಚುನಾವಣೆಯಲ್ಲಿ ಸೋತು ಇನ್ನೊಂದು ಕ್ಷೇತ್ರಕ್ಕೆ ಹೋದರೆ ಅಷ್ಟು ಒಳ್ಳೆಯದು ಅಲ್ಲ ಅನ್ನೋದು ನನ್ನ ಭಾವನೆ. ಬೇಕಾದಷ್ಟು ಜನ ಹೋಗಿರಬಹುದು. ಸಿದ್ದರಾಮಯ್ಯ ನಿಮಗೆ ಆತ್ಮಸ್ಥೈರ್ಯ ಇಲ್ಲ. ಯಾವ ಕ್ಷೇತ್ರದಲ್ಲಿ ಸಾಬರು ಜಾಸ್ತಿ ಇದಾರೆ. ಎಲ್ಲಿ ಜಾಸ್ತಿ ದುಡ್ಡು ಹಂಚಬಹುದು, ಎಲ್ಲಿ ನನ್ನ ಜಾತಿ ಜನ ಹೆಚ್ಚಿದ್ದಾರೆ ಹೋಗ್ತಿರಿ. ಇಂತಹ ದಯನೀಯ ಸ್ಥಿತಿ ಒಬ್ಬ ಸಿಎಂ ಆದವರಿಗೆ ಬರಬಾರದು ಎಂದು ಹೇಳಿದರು.