ರಾಂಪುರ, ಅ 14 (DaijiworldNews/MS): ಸದ್ಯ ಕರ್ನಾಟಕದಲ್ಲಿ ಇರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೊ ಯಾತ್ರೆ'ಯು ಶುಕ್ರವಾರ ಆಂಧ್ರ ಪ್ರದೇಶದಲ್ಲಿ ಚುಟುಕು ಭೇಟಿ ನೀಡಲಿದ್ದಾರೆ.
ಇಂದು ಚಿತ್ರದುರ್ಗದ ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಬೆಂಬಲಿಗರ ಜೊತೆ ರಾಹುಲ್ ಗಾಂಧಿ ಬೆಳಿಗ್ಗೆ ಕಾಲ್ನಡಿಗೆ ಆರಂಭಿಸಿದ್ದಾರೆ.ಸಂಜೆ ಆಂಧ್ರ ಪ್ರದೇಶದಲ್ಲಿ ಸ್ವಲ್ಪ ಸಮಯ ಕಳೆಯುವ ರಾಹುಲ್ ಗಾಂಧಿ ನಂತರ ಕರ್ನಾಟಕಕ್ಕೆ ವಾಪಸ್ ಆಗಲಿದ್ದಾರೆ.
ಕರ್ನಾಟಕಕ್ಕೆ ವಾಪಸ್ ಆಗುವ ರಾಹುಲ್ ಗಾಂಧಿ ಬಳ್ಳಾರಿಯ ಹಲಕುಂದಿ ಮಠದಲ್ಲಿ ರಾತ್ರಿ ತಂಗಲಿದ್ದಾರೆ. ಸೆಪ್ಟೆಂಬರ್ 30ರಂದು ಕರ್ನಾಟಕ ಪ್ರವೇಶಿಸಿರುವ ಯಾತ್ರೆಯು ಅಕ್ಟೋಬರ್ 20ರಂದು ನಿರ್ಗಮಿಸಲಿದೆ.