ನವದೆಹಲಿ, ಅ 13 (DaijiworldNews/MS): ಪ್ರಸ್ತುತ ಶಶಿ ತರೂರ್ ವಿರುದ್ಧ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ "ಅಧ್ಯಕ್ಷ ಸ್ಥಾನದ ಚುನಾವಣೆಯ ಬಳಿಕ ಪಕ್ಷದ ಪ್ರಧಾನಿ ಅಭ್ಯರ್ಥಿಯ ಬಗ್ಗೆ ನೋಡೋಣ" ಎಂದು ಹೇಳಿದ್ದಾರೆ.
ಭೋಪಾಲದಲ್ಲಿ ಪ್ರಚಾರ ನಡೆಸಿದ ವೇಳೆ, ಪತ್ರಕರ್ತರು 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ನ ಪ್ರಧಾನಿ ಅಭ್ಯರ್ಥಿ ಯಾರು ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ಉತ್ತರಿಸಿದ ಖರ್ಗೆ, “ಮೊದಲು ಈ ಚುನಾವಣೆಯನ್ನು ಎದುರಿಸೋಣ". “ಬಕ್ರೀದ್ ಮೇ ಬಚೇಂಗೆ ತೊ ಮೊಹರಮ್ ಮೇ ನಾಚೇಂಗೆ'(ಬಕ್ರೀದ್ ಹಬ್ಬದಲ್ಲಿ ಉಳಿದರೆ ಮೊಹರಂ ಹಬ್ಬದಲ್ಲಿ ಕುಣಿಯೋಣ). ಮೊದಲು ಈ ಚುನಾವಣೆಗಳು ಮುಗಿದು ನಾನು ಅಧ್ಯಕ್ಷನಾಗಲಿ, ಆಮೇಲೆ ನೋಡೋಣ,’ ಎಂದು ಹೇಳಿದ್ದಾರೆ
ಚುನಾಯಿತರಾದರೆ, ಅವರು ಪ್ರಧಾನಿ ಅಭ್ಯರ್ಥಿಯಾಗಿಯೂ ಸ್ಪಷ್ಟ ಆಯ್ಕೆಯಾಗುತ್ತಾರೆಯೇ? ಎಂಬ ಪ್ರಶ್ನೆಗೆ ಖರ್ಗೆ ಅವರು ಅಷ್ಟು ದೂರ ಯೋಚಿಸಲು ಬಯಸುವುದಿಲ್ಲ ಹೇಳಿದರೂ , ಅವರು ಯಾವುದನ್ನೂ ತಳ್ಳಿಹಾಕಲಿಲ್ಲ ಎನ್ನುವುದು ಸ್ಪಷ್ಟವಾಗಿದೆ.