ಜಮ್ಶೆಡ್ಪುರ, ಅ 13 (DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಅಭಿಯಾನದಿಂದ ಪ್ರೇರಿತಳಾದ ಯುವತಿಯೊಬ್ಬಳು ಪೋಷಕರು ನೀಡಿದ ಪಾಕೆಟ್ ಮನಿ ಸಂಗ್ರಹಿಸಿಟ್ಟುಕೊಂಡು ಶಾಲೆಯಲ್ಲಿ ಶೌಚಾಲಯ ನಿರ್ಮಿಸಲು ನೆರವು ನೀಡಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಈ ಕುರಿತು ಮಾತನಾಡಿರುವ ಯುವತಿ ಮಾಂಡ್ರಿಟಾ ಚಟರ್ಜಿ, ಶೌಚಾಲಯ ಸಮಸ್ಯೆಯಿಂದಾಗಿ ಹೆಣ್ಣುಮಕ್ಕಳು ಶಿಕ್ಷಣ ತ್ಯಜಿಸುವುದನ್ನು ನಾನು ಅರಿತಿದ್ದೇನೆ. ಅದಕ್ಕಾಗಿ 2014ರಿಂದ ಪಾಕೆಟ್ ಮನಿ ಉಳಿಸಲು ಪ್ರಾರಂಭಿಸಿದೆ ಎಂದರು.
ಇನ್ನು ನಾನು ಈವರೆಗೆ ಒಟ್ಟು 24 ಸಾವಿರ ಪಾಕೆಟ್ ಮನಿ ಉಳಿತಾಯ ಮಾಡಿದ್ದು, ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರ 12 ಸಾವಿರ ಸಹಾಯಧನ ನೀಡುವ ಯೋಜನೆ ಬಗ್ಗೆ ತಿಳಿದುಕೊಂಡಿದ್ದೇನೆ. ಅದರಂತೆ ತೆಲಂಗಾಣದ ಒಂದು ಹಳ್ಳಿಯಲ್ಲಿ 2 ಶೌಚಾಲಯಗಳನ್ನು ನಿರ್ಮಿಸಲು ವೈಯಕ್ತಿಕವಾಗಿ ಸಹಾಯ ಮಾಡಿದ್ದೇನೆ ಎಂದು ಎಂದಿದ್ದಾರೆ.