ಕಾನ್ಪುರ, ಅ 11 (DaijiworldNews/MS): ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಮಲಗಿದ್ದ ವ್ಯಕ್ತಿಯ ಮೊಬೈಲ್ ಕದ್ದ ಘಟನೆ ಕಾನ್ಪುರದಲ್ಲಿ ನಡೆದಿದೆ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.ಬಳಿಕ ಕಾನ್ಸ್ಟೆಬಲ್ನನ್ನು ಅಮಾನತು ಮಾಡಲಾಗಿದೆ.
ಕಾನ್ಪುರದ ಮಹಾರಾಜಪುರ ಪ್ರದೇಶದ ಛತ್ಮಾರಾ ಛೇದಕದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದಾಗ,ಮಲಗಿದ್ದ ವ್ಯಕ್ತಿಯ ಬಳಿಗೆ ತೆರಳಿ ಆತನ ಮೊಬೈಲ್ ಕದ್ದು ಅಲ್ಲಿಂದ ತೆರಳಿದ್ದು ಕಾನ್ಸ್ಟೆಬಲ್ ಕಳ್ಳತನದ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ವಿಡಿಯೊ ವೈರಲ್ ಆದ ನಂತರ, ಪೊಲೀಸ್ ಅಧಿಕಾರಿಗಳು ಈ ವಿಷಯದ ಬಗ್ಗೆ ತನಿಖೆ ನಡೆಸಿದ್ದು, ಮಹಾರಾಜಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ತೈಪತ್ ಪ್ರಗೇಶ್ ಸಿಂಗ್ ಎಂಬಾತ ಕದ್ದಿರುವುದು ತಿಳಿದುಬಂದಿದೆ.
ಮಹಾರಾಜಪುರ ಛತ್ಮಾರಾ ನಿವಾಸಿ ನಿತಿನ್ ಸಿಂಗ್ ಶನಿವಾರ ರಾತ್ರಿ ಕ್ರಾಸ್ರೋಡ್ನಲ್ಲಿರುವ ತಮ್ಮ ಅಂಗಡಿಯ ವರಾಂಡಾದಲ್ಲಿ ಮಲಗಿದ್ದರು. ಶನಿವಾರ ರಾತ್ರಿ, ಛತ್ಮಾರಾ ಛೇದಕದಲ್ಲಿ ಮಹಾರಾಜಪುರ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಪ್ರಗೇಶ್ ಸಿಂಗ್ ಮತ್ತು ಹೋಮ್ ಗಾರ್ಡ್ನ ಕರ್ತವ್ಯವನ್ನು ನಿಯೋಜಿಸಲಾಗಿತ್ತು. ಆರೋಪಿ ಕಾನ್ಸ್ಟೆಬಲ್ನನ್ನು ಅಮಾನತುಗೊಳಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಔಟರ್ ವಿಜೇಂದ್ರ ದ್ವಿವೇದಿ ತಿಳಿಸಿದ್ದಾರೆ.