ಹರಿಯಾಣ, ಅ 10 (DaijiworldNews/MS): ಹರಿಯಾಣದ ಗುರುಗ್ರಾಮದಲ್ಲಿ ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ನೀರು ತುಂಬಿದ್ದಹೊಂಡದಲ್ಲಿ ಸ್ನಾನ ಮಾಡಲು ಇಳಿದಿದ್ದ ಆರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮೃತಪಟ್ಟವರು 8ರಿಂದ 13 ವರ್ಷದೊಳಗಿನ ಬಾಲಕರು.ಪೊಲೀಸರ ಪ್ರಕಾರ, ಶಂಕರ್ ವಿಹಾರ್ ಕಾಲೋನಿಯ ನಿವಾಸಿಗಳಾದ ದುರ್ಗೇಶ್, ಅಜಿತ್, ರಾಹುಲ್, ಪಿಯೂಷ್, ದೇವಾ ಮತ್ತು ವರುಣ್ ಅವರು ಇಂದು ಮಧ್ಯಾಹ್ನ ಹೊಂಡದಲ್ಲಿ ಸ್ನಾನ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತ ಮಕ್ಕಳ ಕುಟುಂಬಕ್ಕೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಲಾ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ