ಆಂಧ್ರಪ್ರದೇಶ, ಅ 09 (DaijiworldNews/DB): ಪ್ರವಾಸಿ ಬಸ್ಸೊಂದು ಬೆಟ್ಟದಿಂದ ಬಿದ್ದು ಸುಮಾರು 10ಮಂದಿ ಮೃತಪಟ್ಟಿರುವ ಘಟನೆ ಅಲ್ಲೂರಿ ಸೀತಾರಾಮರಾಜು (ಎಎಸ್ಆರ್) ಜಿಲ್ಲೆಯ ವನಜಂಗಿಯಲ್ಲಿ ನಡೆದಿದೆ.
ಬಸ್ನಲ್ಲಿ ಪ್ರವಾಸಿಗರು ವಿಶಾಖಪಟ್ಟಣಂನಿಂದ ಪಾಡೇರುಗೆ ಸಂಚರಿಸುತ್ತಿದ್ದರು. ಬೆಟ್ಟದ ತಪ್ಪಲಿನಲ್ಲಿರುವ ರಸ್ತೆಯಲ್ಲಿ ಬಸ್ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದರೆ, 10 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.