ನವದೆಹಲಿ, ಅ 09 (DaijiworldNews/HR): ಬಿಜೆಪಿಯ ಅಜೆಂಡಾದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳುತ್ತಿದ್ದಾರೆ. ನಂತರ ನಾನು ಕಾಂಗ್ರೆಸ್ನೊಂದಿಗೆ ವಿಲೀನಗೊಳ್ಳಲು ಕೇಳಿದ್ದೇನೆ ಎಂದು ಸ್ವತಃ ಹೇಳುತ್ತಾರೆ. ನಿತೀಶ್ ಗೊಂದಲದಲ್ಲಿದ್ದು, ರಾಜಕೀಯವಾಗಿ ಏಕಾಂಗಿಯಾಗುತ್ತಿದ್ದಾರೆ ಎಂಬ ಭಯ ಅವರಲ್ಲಿ ಕಾಡುತ್ತಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಜೆಡಿಯುವನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸಲು ಪಿಕೆ ಬಯಸಿದ್ದರು ಎಂದು ಆರೋಪಿಸಿರುವ ನಿತೀಶ್ ಕುಮಾರ್ ಹೇಳಿಕೆಗೆ ಪ್ರಶಾಂತ್ ಪ್ರತಿಕ್ರಿಯಿಸಿದ್ದು, ವಯಸ್ಸಿನ ಪರಿಣಾಮ ಅವರ ಮೇಲೆ ಗೋಚರಿಸುತ್ತದೆ. ನಿತೀಶ್ ಕುಮಾರ್ ಏನನ್ನೋ ಹೇಳಲು ಹೋಗಿ ಬೇರೆನೋ ಹೇಳುತ್ತಿದ್ದಾರೆ ಎಂದಿದ್ದಾರೆ.
ಇನ್ನು ಬಿಜೆಪಿಯ ಅಜೆಂಡಾದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನಿತೀಶ್ ಕುಮಾರ್ ಹೇಳುತ್ತಿದ್ದಾರೆ. ನಂತರ ನಾನು ಕಾಂಗ್ರೆಸ್ನೊಂದಿಗೆ ವಿಲೀನಗೊಳ್ಳಲು ಕೇಳಿದ್ದೇನೆ ಎಂದು ಸ್ವತಃ ಹೇಳುತ್ತಾರೆ. ನಿತೀಶ್ ಗೊಂದಲದಲ್ಲಿದ್ದು, ಅವರಿಗೆ ರಾಜಕೀಯವಾಗಿ ಏಕಾಂಗಿಯಾಗುತ್ತಿದ್ದಾರೆ ಎಂಬ ಭಯ ಕಾಡುತ್ತಿದೆ ಎಂದರು.