ಬೆಂಗಳೂರು, ಅ 09 (DaijiworldNews/DB): ತಮ್ಮಿಂದ ವೈಫಲ್ಯ ಆಗಿದೆ ಎಂಬುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಪ್ಪಿಕೊಳ್ಳುತ್ತಿದ್ದಾರೆಯೇ? ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಭದ್ರತೆಯ ಬಲವರ್ಧನೆಯಾಗಬೇಕಾದರೆ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಬೇಕು ಎಂಬ ಅಮಿತ್ ಶಾ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅವರು, ಗಙೃಹ ಸಚಿವರು ಮಾದಕ ವಸ್ತುಗಳ ಕಳ್ಳಸಾಗಣೆ ತಡೆ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳಾದರೂ ಏನು? ತಮ್ಮ ವೈಫಲ್ಯಗಳನ್ನು ಅವರು ಒಪ್ಪಿಕೊಳುಳುವುದಕ್ಕೆ ಹೊರಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವ ಲೋಪಗಳನ್ನು ಟ್ವೀಟ್ ಮೂಲಕ ಪ್ರಶ್ನಿಸುವುದರೊಂದಿಗೆ ಸ್ವಾಮಿ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ನಡುವೆ ಶಾ ವಿರುದ್ದ ಮಾತನಾಡಿದರೆ ಭಕ್ತರು ಸ್ವಾಮಿ ಅವರನ್ನು ಬಾಯ್ಕಾಟ್ ಮಾಡಬೇಕಾಗುತ್ತದೆ ಎಂದು ಬಂದಿರುವ ಕಾಮೆಂಟ್ಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು, ಹಣ ಪಡೆದುಕೊಂಡು ಟ್ವೀಟ್ ಮಾಡುವ ಅಂಧ ಭಕ್ತರು ಮತ್ತು ಗಂಧ ಭಕ್ತರು ಸಾಮಾಜಿಕ ಜಾಲತಾಣವನ್ನು ಮಾಲಿನ್ಯ ಮಾಡಬಾರದು. ಇದಕ್ಕಾಗಿ ಅವರನ್ನು ಬಾಯ್ಕಾಟ್ ಮಾಡುವ ಅವಶ್ಯವಿದೆ ಎಂದಿದ್ದಾರೆ.