ನವದೆಹಲಿ, ಅ 09 (DaijiworldNews/HR): ವರ್ಣ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಬಿಜೆಪಿಯು ದೇಶವನ್ನು ಭಾಗಗಳನ್ನಾಗಿ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ) ಮುಖಂಡ ದುರ್ಗೇಶ್ ಪಾಠಕ್ ಹೇಳಿದ್ದಾರೆ.
ಮೋಹನ್ ಭಾಗವತ್ ಅವರು ಕಾರ್ಯಕ್ರಮವೊದರಲ್ಲಿ 'ಜಾತಿ ವ್ಯವಸ್ಥೆಯು ಈಗ ಪ್ರಸ್ತುತವಾಗಿಲ್ಲ. ವರ್ಣ ಮತ್ತು ಜಾತಿಯಂಥ ಪರಿಕಲ್ಪನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು' ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ದುರ್ಗೇಶ್ ಪಾಠಕ್, ಆರ್ಎಸ್ಎಸ್ ಸಂಘಟನೆಯಲ್ಲಿ ಮೇಲ್ಜಾತಿಯವರು ಮಾತ್ರ ಏಕೆ ಮುಖ್ಯಸ್ಥರಾಗಿರುತ್ತಾರೆ ಎಂಬುದನ್ನು ಮುಖ್ಯಸ್ಥ ಮೋಹನ್ ಭಾಗವತ್ ವಿವರಿಸಬೇಕು ಎಂದಿದ್ದಾರೆ.