ನವದೆಹಲಿ, ಅ 08 (DaijiworldNews/HR): ಮುಂಬೈನಿಂದ ಗುಜರಾತ್ನ ಗಾಂಧಿನಗರವರೆಗೆ ವಂದೇ ಭಾರತ್ ರೈಲು ಸಂಚರಿಸುವ ಹಳಿಯ ಎರಡೂ ಬದಿಗಳಲ್ಲಿ ಬೇಲಿ ಹಾಕಲಾಗುವುದು ಎಂದು ಪಶ್ಚಿಮ ರೈಲ್ವೇ ತಿಳಿಸಿದೆ.
ಎಮ್ಮೆಗಳಿಗೆ ಹಾಗೂ ಹಸುವಿಗೆ ವಂದೇಭಾರತ್ ಸೆಮಿ ಹೈ ಸ್ಪೀಡ್ ರೈಲು ಡಿಕ್ಕಿ ಹೊಡೆದ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇನ್ನು 2024ರೊಳಗೆ ಸಂಪೂರ್ಣವಾಗಲಿದ್ದು, ಹಳ್ಳಿ ಜನತೆಗೆ ಅರಿವು ಮೂಡಿಸಲು ಸ್ಥಳೀಯ ರೈಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.